ದೊಡ್ಡ ಸುದ್ದಿ

ಸಿಎಂ ದುಬಾರಿ ವಾಚ್ ಕೊಟ್ಟವರ ಕತೆ ಗೊತ್ತಾ..?

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಸಿಎಂ ಗಿರೀಶ್‌ ಚಂದ್ರ ವರ್ಮಾ ಎಂಬ ವೈದ್ಯರು ನನಗೆ ಬಹಳ ಆತ್ಮೀಯ ಗೆಳೆಯ. ಜುಲೈ ತಿಂಗಳಲ್ಲಿ ಭಾರತಕ್ಕೆ ಬಂದಿದ್ರು. 1983 ರಿಂದಲೇ ಅವರ ನನ್ನ ಗೆಳೆತನವಿದೆ. ಇವರು ಮೂಲತಃ ಕೇರಳದವರು. 2015ರ ಜುಲೈ ತಿಂಗಳಲ್ಲಿ ನನಗೆ ವಾಚ್‌ ಅನ್ನು ಕೊಟ್ಟಿದ್ರು. ನನ್ನನ್ನು ಭೇಟಿ ಮಾಡಿದಾಗ ಅವರ ಕೈಯಲ್ಲಿರುವ ವಾಚ್ ಅನ್ನು ಬಿಚ್ಚಿ ನನಗೆ ನೀಡಿದ್ದರು ಎಂದು ತಿಳಿಸಿದರು.

ತಮ್ಮ ಸ್ನೇಹಿತ

ನನ್ನ ಸ್ನೇಹಿತ ವೈದ್ಯ ಇಲ್ಲಿಗೆ ಬಂದು ಬಿಲ್ ಮತ್ತು ಎಲ್ಲ ದಾಖಲೆಗಳನ್ನು ಕೊಡ್ತೇನೆ ಅಂದಿದ್ದಾರೆ. ದುಬೈನಲ್ಲಿ ಈ ವಾಚಿನ ಬೆಲೆ 75 ಸಾವಿರ ದಿರಾಮ್ ಎಂದಿದ್ದಾರೆ. ಇಲ್ಲಿ ಹಣಕ್ಕೆ ಹೋಲಿಸಿದ್ರೆ 14.25  ಲಕ್ಷವಾಗುತ್ತೆ. ಲೋಕಾಯುಕ್ತಕ್ಕೆ ಜೂನ್‌ನಲ್ಲಿ ಆಸ್ತಿ ವಿವರ ನೀಡುವ ವೇಳೆ ಮಾಹಿತಿ ನೀಡ್ತೇನೆ. ಜುಲೈನಲ್ಲಿ ತೆರಿಗೆ ಇಲಾಖೆಗೆ ಮಾಹಿತಿ ನೀಡ್ತೇನೆ. ಇದು ಸೆಕೆಂಡ್ ಹ್ಯಾಂಡ್ ವಾಚ್ ಅಂತಾ ನನ್ನ ಸ್ನೇಹಿತ ಹೇಳಿದ್ದಾನೆ ಎಂದರು.

ಸಿಎಂ ಸ್ನೇಹಿತ ಗಿರೀಶ್‌ ಚಂದ್ರ ವರ್ಮಾ

ನನ್ನ ಗೆಳೆಯ ಈ ವಾಚ್ ಬಗ್ಗೆ ಈಗಾಗಲೇ ಕೋರ್ಟ್ ಅಫಿಡವಿಟ್ ಮಾಡಿ ಕೊಟ್ಟಿದ್ದಾನೆ. ಇಲ್ಲಿಗೆ ಬಂದಾಗ ಬಿಲ್ ಸೇರಿ ಇತರೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಅವರು ವೈದ್ಯರಾಗಿದ್ದು ಬ್ಯುಸಿಯಾಗಿದ್ದರಿಂದ ಈವರೆಗೆ ಅವರ ಹೆಸರನ್ನು ಹೇಳಿರಲಿಲ್ಲ, ಈಗ ಬಹಿರಂಗಪಡಿಸುತ್ತಿರುವುದಾಗಿ ತಿಳಿಸಿದರು.

ಹೆಚ್‌ಡಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಚಿಂತನೆ

ಇನ್ನು ಈ ವಾಚ್‌ 75 ಲಕ್ಷ ರೂ. ಮೌಲ್ಯದ್ದು ಎನ್ನುವ ಕುಮಾರಸ್ವಾಮಿ ಆರೋಪ ಸತ್ಯಕ್ಕೆ ದೂರ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ. ಕುಮಾರಸ್ವಾಮಿ ಪುತ್ರನ ಕಾರು, ವಾಚ್‌ ಬಗ್ಗೆ ಪ್ರತಿಕ್ರಿಯಿಸಲ್ಲವೆಂದು  ಹೇಳಿದರು.

ಈ ವಾಚ್ ನನಗೆ ಉಡುಗೊರೆಯಾಗಿ ಬಂದಿದ್ದು, ಇದಕ್ಕೆ ಗಿಫ್ಟ್ ಟ್ಯಾಕ್ಸ್ ಕಟ್ಟುತ್ತೇನೆ. ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತೇನೆ. ಆದರೆ ಇದನ್ನು ಇನ್ನು ಮುಂದೆ ಧರಿಸುವುದಿಲ್ಲ. ಬದಲಾಗಿ ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನಲ್ಲಿ ಇಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ವಿವಾದಕ್ಕೆ ತೆರೆ ಎಳೆದರು.