ಗಿರೀಶ್ ವರ್ಮಾ ದಾವಣಗೆರೆಯವರು. ಅವರು ಇವರಿಗೆ ಹೇಗೆ ಸ್ನೇಹಿತರಾದರು? ಸಿಎಂ ಸಿದ್ದರಾಮಯ್ಯ 1983 ರಲ್ಲಿ ಯಾರ ರೂಂನಲ್ಲಿ ಇದ್ದರು. ಇದು ಸುಧಾಕರ್ ಶೆಟ್ಟಿ ಎಂಬುವರ ವಾಚ್. ಈ ವಾಚು ಕಳ್ಳತನವಾಗಿತ್ತು. ಇದರ ಕುರಿತು ಸಮಗ್ರ ತನಿಖೆ ಆಗಬೇಕು ಎಂದಿದ್ದಾರೆ.
ನನ್ನ ಮಗ ಯಾರಿಂದಲೂ ಕಾರನ್ನು ಗಿಫ್ಟ್ ಪಡೆದಿಲ್ಲ. ಲ್ಯಾಂಡ್ರೋವರ್ ಕಾರು ಅವನ ಸ್ವಂತ ದುಡ್ಡಲ್ಲಿ ಖರೀದಿಸಿದ್ದಾನೆ. ನಾನು ಸಿಎಂ ಆಗಿದ್ದಾಗ ವಿಜಯಪುರದ ಜನತೆ ನಾನು ಮಾಡಿದ ಅನುಕೂಲಕ್ಕಾಗಿ ಒಂದು ಬೆಳ್ಳಿ ಕುರ್ಚಿ ನೀಡಿದ್ದರು. ಅದನ್ನು ನಾನು ಬಳಸಿಕೊಳ್ಳಲಿಲ್ಲ. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಡಾ. ಸಿದ್ದಲಿಂಗ ಸ್ವಾಮೀಜಿಗಳಿಗೆ ಸಮರ್ಪಿಸಿದೆ.
ನಮ್ಮ ಕುಟುಂಬದ ಮೇಲೆ ದಾಳಿ ಹೊಸದಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ನನ್ನ ಮೇಲೆ ಆರೋಪ ಮಾಡಿದ್ದರು. 1.5 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದೇನೆಂದು, ನನ್ನ ಮನೆಯಲ್ಲಿ ದುಬಾರಿ ವಾಚುಗಳಿವೆ ಎಂದು ಅಲ್ಲದೆ 1.3 ಕೋಟಿ ರೂ. ಬೆಲೆಯ ವಾಚು ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಅದ್ಯಾವುದೂ ನನ್ನ ಬಳಿ ಇಲ್ಲ. ಅಂದರೆ ಅವೆಲ್ಲಾ ಕಳ್ಳನತವಾಗಿವೆಯೇ? ಹುಡುಕಿಸಬೇಕಿದೆ. ಇನ್ನು ನನ್ನ ಮನೆ ಮುಂದೆ ಎಲ್ಲಾ ಕಾರುಗಳು ನಿಂತೇ ಇವೆ. ಯಾರು ಬೇಕಾದರೂ ಬಂದು ಪರಿಶೀಲಿಸಲಿ. ಅಥವಾ ಪೊಲೀಸರನ್ನೇ ಕಳಿಸಿ ಪರಿಶೀಲಿಸಲಿ ಎಂದಿದ್ದಾರೆ.
ಸಿಎಂ ಅವರಿಗೆ ದುಬಾರಿ ವಾಚ್ ಕಟ್ಟಬೇಡಿ ಎಂದು ನಾನು ಯಾವತ್ತೂ ಹೇಳಿಲ್ಲ. ನಾನು ಸಮಾಜವಾದಿಯಲ್ಲ, ಮಜಾವಾದಿ ಎಂದು ಒಪ್ಪಿಕೊಳ್ಳಿ ಎಂದು ಸಿಎಂಗೆ ಹೇಳಿದ್ದೆ. ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನ ಬದುಕು ತೆರೆದ ಪುಸ್ತಕ. ಯಾರ ಚಾರಿತ್ರ್ಯವಧೆ ಮಾಡಲ್ಲ. ಮಾಡಬೇಕೆಂದರೆ ಇವರ 10ರಷ್ಟು ಮಾಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ತಪ್ಪು ಮಾಡಿದ್ದೇನೆ. ಅದನ್ನು ಸರಿಪಡಿಸಿಕೊಂಡಿದ್ದೇನೆ. ಸಾರ್ವಜನಿಕರ ಹಣ ಹೊಡೆಯುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.