ಕೋಟಿ ಕೋಟಿ ಹಣ ಇದ್ರೂ ಕೂಡ ಅವರಿಗೆ ಸರಕಾರದ ಹಣವೇ ಬೇಕು. ಉತ್ತರ ಪ್ರದೇಶ ಸರಕಾರ ತಮ್ಮ ರಾಜ್ಯದವರಿಗೆ ಯಶ್ ಭಾರತಿ ಸನ್ಮಾನ್ ಎನ್ನುವ ಪಿಂಚಣಿ ವ್ಯವಸ್ಥೆಯೊಂದನ್ನು ಜಾರಿ ಮಾಡಿದೆ.
ಜನವರಿ ೩೧ರೊಳಗೆ ಬರೋಬರಿ ೧೪೧ ಮಂದಿಯಿಂದ ಈ ಪಿಂಚಣಿಗೆ ಅರ್ಜಿ ಗುಜರಾಯಿಸಿಕೊಳ್ಳಲಾಗಿದೆ. ಈ ಬಳಿಕ ಅದರಲ್ಲಿ ಕೆಲವರ ಹೆಸರನ್ನು ಬಿಟ್ಟು ಬಿಡಲಾಗಿದೆ. ಈಗ ೧೦೦ ಮಂದಿಗಂತೂ ಈ ವ್ಯವಸ್ಥೆಯ ಲಾಭ ಸಿಗಲಿದೆ.
ಅದರಲ್ಲಿ ಅರ್ಜಿ ಗುಜರಾಯಿಸಿದವರು ಯಾರು ಅಂತೀರಾ ಕೋಟಿ ಕೋಟಿ ಹಣ ಇಟ್ಟುಕೊಂಡವರಾದ ಕ್ರಿಕೆಟಿಗ ಸುರೇಶ್ ರೈನಾ, ರಾಜಕಾರಣಿ ರಾಜ್ ಬಬ್ಬರ್, ಅವರ ಪತ್ನಿ ನಾದಿರಾ, ಶಾಸ್ತ್ರೀಯ ಗಾಯಕ ಗಿರಿಜಾ ದೇವಿ, ಚನ್ನು ಲಾಲ್ ಮಿಶ್ರಾ. ಅಂದಹಾಗೆ ಪಿಂಚಣಿಯ ಮೌಲ್ಯವೆಷ್ಟು ಗೊತ್ತಾ ಬರೋಬರಿ ೫೦ ಸಾವಿರ ರೂಪಾಯಿ. ಇದರ ಜತೆಯಲ್ಲಿ ಬಿಗ್ ಬಿ, ಜಯಾ ಬಾಧುರಿ, ಅಭಿಷೇಕ್ ಬಚ್ಚನ್ಗೂ ಈ ಪಿಂಚಣಿ ತಲುಪುತ್ತಿದೆ. ಉತ್ತರ ಪ್ರದೇಶ ಸರಕಾರ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಈ ಪಿಂಚಣಿಯನ್ನು ನೀಡುತ್ತಿದೆ.
ಕೋಟಿ ಪಡೆಯುವ ಸೆಲೆಬ್ರಿಟಿಗಳು ಸರಕಾರದ ಪಿಂಚಣಿಗೆ ಕೈ ಚಾಚಿದರು !
