ರಿಕ್ಷಾ ಚಾಲಕರೆಂದರೆ ನಾವು ನೋಡುವ ರೀತಿಯೇ ಭಿನ್ನ. ನೀವು ದೇಶದ ಯಾವುದೇ ಮೂಲೆಗಾದರೂ ಹೋಗಿ ಅಲ್ಲಿಯ ರಿಕ್ಷಾ ಚಾಲಕರು ಆ ಊರನ್ನು ಪ್ರತಿನಿಧಿಸುವ ರಾಯಭಾರಿ ಎನ್ನುವ ಮಾತಿದೆ. ಚೆನ್ನೈ ಮೂಲದ ರಿಕ್ಷಾ ಚಾಲಕ ರವಿಚಂದ್ರನ್ ರಿಯಲ್ ಕತೆ ಕೇಳಿದ್ರೆ ಸಾಕು ಕಣ್ಣು ತುಂಬಾ ನೀರು ತುಂಬಿ ಬರೋದು ಗ್ಯಾರಂಟಿ.
ರವಿಚಂದ್ರನ್ ಹೇಳಿಕೊಳ್ಳುವ ಶ್ರೀಮಂತನಲ್ಲ..ಆದರೆ ಆತನಲ್ಲಿ ಹೃದಯದ ಶ್ರೀಮಂತಿಕೆಯಿದೆ. ಬದುಕು ಕೊಡುತ್ತಿದ್ದ ರಿಕ್ಷಾವನ್ನು ಮಾರಿಕೊಂಡು ಪ್ರಯಾಣಿಕನಿಗೆ ನೆರವಾಗುವ ಮೂಲಕ ಅಪರೂಪದ ರಿಕ್ಷಾ ಚಾಲಕ ಎನ್ನುವ ಟ್ಯಾಗ್ಲೈನ್ ಅಂಟಿಸಿಕೊಂಡಿದ್ದಾನೆ. ಅವನ ಕತೆ ಕೇಳಿ ಸರ್…
ರವಿಚಂದ್ರನ್ ತನ್ನ ರಿಕ್ಷಾದಲ್ಲಿ ಬಂಗಾಳಿ ಮೂಲದ ಪ್ರಯಾಣಿಕನನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಚಾನಕ್ ಆಗಿ ಲೈಟ್ ಆಗಿ ಹೃದಯಾಘಾತವಾಯಿತು. ರವಿಚಂದ್ರನ್ಗೂ ದಿಕ್ಕೇ ಕಾಣಲಿಲ್ಲ. ಬಂಗಾಳಿ ಭಾಷೆಯಂತೂ ರವಿಚಂದ್ರನ್ಗೆ ಗೊತ್ತೇ ಇರಲಿಲ್ಲ. ನೇರವಾಗಿ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಿಕೊಂಡರು. ಆದರೆ ಬಂಗಾಳಿ ವ್ಯಕ್ತಿಗೆ ತಕ್ಷಣವೇ ಅಪರೇಶನ್ ಮಾಡಲೇ ಬೇಕಿತ್ತು. ಆದರೆ ಪ್ರಯಾಣಿಕನಲ್ಲಿ ಅಷ್ಟೊಂದು ಹಣವೇ ಇರಲಿಲ್ಲ. ಪ್ರಯಾಣಿಕನನ್ನು ಅರ್ಧದಲ್ಲಿಯೇ ಬಿಟ್ಟು ಹೋಗಲು ರವಿಚಂದ್ರನ್ಗೆ ಮನಸ್ಸೇ ಬರಲಿಲ್ಲ. ಬಂಗಾಳಿ ಮೂಲದ ವ್ಯಕ್ತಿಯ ಮನೆಯವರಿಗೆ ರವಿಚಂದ್ರನ್ ಕರೆ ಮಾಡಿದರು.
ಪುತ್ರ ತಕ್ಷಣವೇ ಕೊಲ್ಕತ್ತಾದಿಂದ ಹೊರಟು ಬರಲು ರೆಡಿಯಾದರು. ಆದರೆ ಚಿಕಿತ್ಸೆಗೆ ಭರ್ತಿ ೧ ಲಕ್ಷ ರೂಪಾಯಿ ತಗಲುತ್ತದೆ ಎಂದು ಹೇಳಿ ಬಿಟ್ಟರು. ಆದರೆ ಅಷ್ಟು ದೊಡ್ಡ ಮೊತ್ತ ನನ್ನಲ್ಲಿ ಇಲ್ಲ ಎಂದು ೧೫ ಸಾವಿರ ರೂಪಾಯಿ ಮಾತ್ರ ಇದೆ ಎಂದು ಹೊರಟು ನಿಂತರು. ವೈದ್ಯರಂತೂ ಆಪರೇಶನ್ ಮಾಡದೇ ಹೋದರೆ ರೋಗಿ ಬದುಕುವುದೇ ಕಷ್ಟ ಎಂದು ಬಿಟ್ಟರು. ರವಿಚಂದ್ರನ್ ದಿಕ್ಕೇ ಕಾಣಲಿಲ್ಲ. ತನ್ನಲ್ಲಿದ್ದ ರಿಕ್ಷಾವನ್ನೇ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿ ಬಿಟ್ಟರು.