ದೊಡ್ಡ ಸುದ್ದಿ ಹೊಸ ಸುದ್ದಿ

ಮೈ ಕೈ ಸುಟ್ಟ ಬಾಲಕನಿಗೆ 200 ರೂ ನೆರವು… ಸೋನಿಯಾ ಇಷ್ಟು ಜಿಪುಣಿಯಾ?

ಹೌದು..ಈ ಕ್ಷೇತ್ರ ವ್ಯಾಪ್ತಿಯಲ್ಲಿ ಗೂರಿ ಬಜಾರ್‌ ಅಂತಾ ಇದೆ. ಇಲ್ಲಿ 10 ವರ್ಷದ ಬಾಲಕ ಶಂಶಾದ್ ಅಂತಾ ಇದ್ದಾನೆ. ಮೂರು ವರ್ಷಗಳ ಹಿಂದೆ ಯಾವುದೋ ಪ್ರಮಾದದಲ್ಲಿ ಈತನಿಗೆ ಸುಟ್ಟ ಗಾಯಗಳಾಗಿದ್ದು ಈಗಲೂ ನರಳುತ್ತಿದ್ದಾನೆ.  ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಪ್ರತಿದಿನ ಕುಡಿದು ಮನೆಗೆ ಬರುವ ತಂದೆ. ಹೀಗಾಗಿ ಆತನಿಗೆ ಕಳೆದ ಮೂರು ವರ್ಷಗಳಿಂದ ಯಾವುದೇ ರೀತಿಯ ಚಿಕಿತ್ಸೆ ಲಭ್ಯವಾಗಿಲ್ಲ. ದಿನದಿಂದ ದಿನಕ್ಕೆ ಆತನ ಮೈ ಚರ್ಮ ಸುಲಿಯುತ್ತಿದೆ. ಹೀಗಾಗಿ ಅಲ್ಲಿ ಇಲ್ಲಿ ನೆರವಿಗಾಗಿ ಅಲೆದ ಬಾಲಕ ಎರಡು ದಿನಗಳ ಹಿಂದೆ  ರಾಯ್‌ಬರೇಲಿಗೆ ಆಗಮಿಸಿದ್ದ ಸಂಸದೆ ಸೋನಿಯಾ ಗಾಂಧಿ ಗೆಸ್ಟ್‌‌ ಹೌಸ್‌ಗೆ ತೆರಳಿ ಚಿಕಿತ್ಸೆಗೆ ನೆರವಾಗುವಂತೆ ಮನವಿ ಮಾಡಿದ್ದಾನೆ.

ಸೋನಿಯಾ ಬಾಲಕನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದೇ ಭರವಸೆಯಲ್ಲಿ ಬಾಲಕ ಅಲ್ಲಿಂದ ಹಿಂತಿರುಗುತ್ತಿದ್ದಾಗ ಕಾಂಗ್ರೆಸ್‌ ಮುಖಂಡನೋರ್ವ ಆತನ ಕೈಗೆ 200 ರೂಪಾಯಿ ನೀಡಿದ್ದಾನೆ.

ಈ ಹಿಂದೆ ಸಹ ಎರಡು  ಸಲ ಭೇಟಿಯಾದಾಗಲೂ ಸೋನಿಯಾ ಗಾಂಧಿ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿದ್ದರಂತೆ. ಸೋನಿಯಾ ಗಾಂಧಿ ಭರವಸೆ ಹೊರತು ಪಡಿಸಿದರೆ ಬೇರೇನೂ ಮಾಡಿಲ್ವಂತೆ.