ದೊಡ್ಡ ಸುದ್ದಿ

ಅರಮನೆಗಳ ನಗರಿಗೆ ದಕ್ಕಿತು ಸ್ವಚ್ಛತೆಯ ಗರಿ!

ಭಾರತದ ಸ್ವಚ್ಛತೆಯ ನಗರಿಯಲ್ಲಿ ಮೈಸೂರಿಗೆ ಅಗ್ರಸ್ಥಾನ ಲಭ್ಯವಾಗಿದೆ. ಇದು ಎರಡನೇ ಬಾರಿಗೆ ಮೈಸೂರಿಗೆ ಸಲ್ಲುವ ಕೀರ್ತಿ ಎನ್ನುವುದು ಗಮನಿಸಬೇಕಾದ ವಿಷ್ಯಾ. ಇದರಲ್ಲಿ ಪ್ರಧಾನಿ ಮೋದಿ ಅವರು ಸ್ವರ್ಧಿಸಿದ್ದ ವಾರಾಣಾಸಿ ನಗರವಂತೂ ತನ್ನ ಹಿಂದಿನ ಸ್ಥಾನವನ್ನು ಕಳೆದುಕೊಂಡಿದೆ. ಈ ನಗರ ಕೊಳಚೆ ಪಟ್ಟಿಯಲ್ಲಿ ಇಣುಕುವ ಸಾಧ್ಯತೆ ಇದೆ.

ಕೇಂದ್ರ ಸರಕಾರದ ‘ಸ್ವಚ್ಛ ಸವೇಕ್ಷನಾ ಕ್ಯಾಂಪೇನ್’ ಅಡಿಯಲ್ಲಿ ಮಾಡಲಾದ ಸಮೀಕ್ಷೆಯಲ್ಲಿ ಮೈಸೂರು ನಗರ ಮೊದಲ ಸ್ಥಾನ ಲಭಿಸಿದೆ. ಉಳಿದಂತೆ ಚಂಡೀಗಢ, ತಿರುಚನಪಳ್ಳಿ, ದಿಲ್ಲಿ,ವಿಶಾಖ ಪಟ್ಟಣ, ಸೂರತ್, ರಾಜ್‌ಕೋಟ್, ಗಂಗಾಟೋಕ್, ಚಿಂಚ್‌ವಾಡಿ, ಗ್ರೇಟರ್ ಮುಂಬಯಿಗೆ ಉಳಿದ ಸ್ಥಾನಗಳು ಲಭ್ಯವಾಗಿದೆ.