ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಹಳೇ ಸಂಪ್ರದಾಯ ಮುರಿದ ದರ್ಶನ್‌!

ಆದರೆ, ಒಂದು ವಿಶೇಷವೆಂದರೆ ಈ ಬಾರಿ ದರ್ಶನ್ ಅವರ ಯಾವೊಂದು ಚಿತ್ರ ಸಹ ಸೆಟ್ಟೇರುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅದೊಂದು ಸಂಪ್ರದಾಯವೇ ಆಗಿ ಹೋಗಿತ್ತು.

ಫೆಬ್ರವರಿ 16 ಬಂತೆಂದರೆ ದರ್ಶನ್ ಅಭಿನಯದ ಯಾವುದಾದರೊಂದು ಚಿತ್ರ ಅಂದು ಸೆಟ್ಟೇರಲೇಬೇಕಿತ್ತು. ಆದರೆ, ಕೊನೆ ಕೊನೆಗೆ ಅದೇ ತಪ್ಪು ಎಂದು ದರ್ಶನ್ ಸೇರಿದಂತೆ ಎಲ್ಲರಿಗೂ ಅನಿಸತೊಡಗಿತ್ತು.

ಅದಕ್ಕೆ ಕಾರಣ, ದರ್ಶನ್ ಅವರ ಹುಟ್ಟುಹಬ್ಬದಂದು ಶುರುವಾದ ಚಿತ್ರಗಳೆಲ್ಲವೂ ಒಂದರ ಹಿಂದೊಂದು ಸೋತಿದ್ದು. ‘ಬೃಂದಾವನ’, ‘ಅಂಬರೀಶ’, ‘ಐರಾವತ’ ಚಿತ್ರಗಳು ದರ್ಶನ್ ಅವರ ಹುಟ್ಟುಹಬ್ಬದಂದೇ ಶುರುವಾಗಿ ಸೋತು ಹೋಗಿದ್ದವು.

ಅದೇ ಕಾರಣಕ್ಕೆ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬದಂದು ಯಾವುದೇ ಚಿತ್ರ ಸೆಟ್ಟೇರುವುದಿಲ್ಲ ಎಂದು ಹೇಳುವುದರ ಜೊತೆಗೆ ಹುಟ್ಟುಹಬ್ಬದ ದಿನದಂದೂ ಕೆಲಸ ಮಾಡುವುದಾಗಿ ಹೇಳಿದರಂತೆ.

ಅದರಂತೆ ದರ್ಶನ್ ಇಂದು ‘ಜಗ್ಗುದಾದಾ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರಂತೆ. ಹಾಗಂತ ಅವರ ಅಭಿಮಾನಿಗಳು ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ದರ್ಶನ್ ತಮ್ಮ ಅಭಿಮಾನಿಗಳ ಜೊತೆಗೆ ಮಧ್ಯಾಹ್ನದವರೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರಂತೆ.

ದರ್ಶನ್ ಹುಟ್ಟುಹಬ್ಬಕ್ಕಾಗಿ ರಾಜ್ಯಾದ್ಯಂತ ಅಭಿಮಾನಿಗಳು ಇಂದು ಮತ್ತು ನಾಳೆ ಬೆಂಗಳೂರಿಗೆ ಬಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

ಇನ್ನು ಅನ್ನದಾನ, ರಕ್ತದಾನ, ವಸ್ತ್ರದಾನ ಮುಂತಾದ ಹಲವು ಚಾರಿಟಬಲ್ ಕೆಲಸಗಳನ್ನು ಅವರ ಅಭಿಮಾನಿಗಳು ಮಾಡಲಿದ್ದಾರೆ.