ದೊಡ್ಡ ಸುದ್ದಿ ಸಿಟಿ ಸುದ್ದಿ ಹೊಸ ಸುದ್ದಿ

ಕ್ರಿಕೆಟಿಗ ರವೀಶಾಸ್ತ್ರೀ ಯರ್ಲಪ್ಪಾಡಿಗೆ ಭೇಟಿ ಕೊಟ್ಟಿದ್ಯಾಕೆ ಗೊತ್ತಾ?!

ಕಾರ್ಕಳದ ಯರ್ಲಪ್ಪಾಡಿಯಲ್ಲಿರುವ ಕರ್ವಾಲು ವಿಷ್ಣುಮೂರ್ತಿ ದೇವಳಕ್ಕೆ ಮಾಜಿ ಕ್ರಿಕೆಟಿಗೆ ಹಾಗೂ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರೀ ಬುಧವಾರ ಭೇಟಿ ನೀಡಿದ್ದಾರೆ.
ಸತತ ಎಂಟನೇ ವರ್ಷದ ಭೇಟಿ ಇದಾಗಿದೆ. ಹಿಂದೆ ಸಂಕಲ್ಪಿಸಿದ ಇಷ್ಟಾರ್ಥ ಸಿದ್ದಿಸಿದ ಪ್ರಯುಕ್ತ ವರ್ಷಂಪ್ರತಿ ಈ ದೇವಳಕ್ಕಾಗಮಿಸುತ್ತಿದ್ದಾರೆ. ವಿವಾಹವಾಗಿ ೧೮ ವರ್ಷಗಳ ಕಾಲ ಮಕ್ಕಳಿಲ್ಲದ ಕಾರಣ, ಮೂಲ ನಾಗದೇವರಿಗೆ ತೆರಳಿ ಪೂಜೆ ಸಲ್ಲಿಸಬೇಕು ಎನ್ನುವ ವಿಚಾರ ತಿಳಿದು ಬಂದ ಹಿನ್ನೆಲೆಯಲ್ಲಿ, ರವಿಶಾಸ್ತ್ರೀ ತಮ್ಮ ಪೂರ್ವಿಜರು ನಂಬಿಕೊಂಡು ಬಂದ ಮೂಲ ನಾಗ ದೇವರ ನಾಗಬನವಿರುವ ಕಾರ್ಕಳ ತಾಲೂಕಿನ ಕರ್ವಾಲಿಗೆ ಆಗಮಿಸಿದ್ದರು.

ಬಳಿಕ ಇಷ್ಟಾರ್ಥ ಸಿದ್ದಿಗಾಗಿ ಸಂಕಲ್ಪಿಸಿಕೊಂಡಂತೆ, ಹೆಣ್ಣು ಮಗುವನ್ನು ಪಡೆದಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ರವಿಶಾಸ್ರ್ತೀ ಕರ್ವಾಲುಗೆ ಆಗಮಿಸುತ್ತಿದ್ದಾರೆ. ವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆ ಹಾಗೂ ನಾಗದೇವರಿಗೆ ಆಶ್ಲೇಷ ಬಲಿ ಸೇವೆ, ಪಂಚಾಮೃತ ಅಭಿಷೇಕ, ನಾಗದರ್ಶನ ಸೇವೆ ಸಲ್ಲಿಸಿದರು.