ದೊಡ್ಡ ಸುದ್ದಿ ಸಿಟಿ ಸುದ್ದಿ

ಕರ್ನಾಟಕ ಮೂಲದ ಐಪಿಎಸ್‌ ಅಧಿಕಾರಿ ಚೆನ್ನೈನಲ್ಲಿ ಆತ್ಮಹತ್ಯೆ?

32 ವರ್ಷದ ಎನ್. ಹರೀಶ್ ಎನ್ನೋ 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾದ ಅಧಿಕಾರಿ. ಚೆನ್ನೈನಲ್ಲಿ ವಿಜಿಲೆನ್ಸ್ ಅಂಡ್ ಆ್ಯಂಟಿ ಕರಪ್ಷನ್ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ ನಿರ್ವಹಿಸುತ್ತಿದ್ದರು.

ಚೆನ್ನೈನ ಎಗ್ಮೋರ್‌ ಪ್ರಾಂತ್ಯದಲ್ಲಿರುವ ಐಪಿಎಸ್ ಅಧಿಕಾರಿಗಳ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಹರೀಶ್, ಬೆಳಗ್ಗೆ 10 ಗಂಟೆಯಾದ್ರೂ ಮನೆಯಿಂದ ಹೊರ ಬಂದಿರಲಿಲ್ಲ. ಹರೀಶ್‌ ಭೇಟಿಗಾಗಿ ಆಗಮಿಸಿದ್ದ ಸಹೋದ್ಯೋಗಿ ಸಿಬ್ಬಂದಿ ಬಾಗಿಲು ಮುರಿದು ಒಳಹೊಕ್ಕಾಗ ಹರೀಶ್ ಸಾವನ್ನಪ್ಪಿರುವುದು ಗೊತ್ತಾಗಿದೆ.

ಹರೀಶ್ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಪದೋನ್ನತಿ ವಿಚಾರದಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಹರೀಶ್ ಬೇಸರಗೊಂಡಿದ್ದರು. ಈ ಕುರಿತು ವಿಚಾರಣೆ ನಡೆಯುತ್ತಿತ್ತು . ಸಾವಿಗೆ ಅದೇ ಕಾರಣವಿರಬಹುದು ಎನ್ನಲಾಗಿದೆ. ಪೊಲೀಸರು ಘಟನೆ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.