ಕನ್ನಡ ಸಿನಿಮಾ ಅಂಗಳದಲ್ಲಿ ಹೊಸಬರ ಚಿತ್ರವೆಂದರೆ ಒಂದು ನಿರೀಕ್ಷೆಯಂತೂ ಇದ್ದೇ ಇರುತ್ತದೆ. ಆತ ಸ್ಟಾರ್ ನಟನಾಗಿರಬೇಕಾಗಿಲ್ಲ. ಒಳ್ಳೆಯ ಚಿತ್ರ ಎಂದು ಪ್ರೇಕ್ಷಕ ಸಿನಿಮಾ ಥಿಯೇಟರ್ನಿಂದ ಹೊರಬಂದು ಹೇಳಿದಾಗ ಅದರ ಗುಟ್ಟು ಬಹಿರಂಗವಾಗಿ ಬಿಡುತ್ತದೆ. ಈ ಮಾತು ಮತ್ತೆ ಸಾಬೀತು ಆಗಿದೆ.
ಅದೇನಪ್ಪಾ ಅಂದರೆ ಸಿನಿಮಾಗಳ ಪಾಲಿನ ಶುಭ ಶುಕ್ರವಾರ ತೆರೆಗೆ ಇಂದು ತೆರೆಗೆ ಬಂದ ೭ ಚಿತ್ರಗಳಲ್ಲಿ ಒಂದು ಮಾತ್ರ ಪ್ರೇಕ್ಷಕ ಒಂದು ಚಿತ್ರಕ್ಕೆ ಮಾತ್ರ ಮತ ಹಾಕಿದ್ದಾನೆ. ಉಳಿದ ಆರು ಚಿತ್ರಗಳು ಕಸದ ಬುಟ್ಟಿಗೆ ಸೇರುವ ಎಲ್ಲ ಲಕ್ಷಣಗಳು ಗೋಚರಕಂಡಿದೆ. ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ‘ಮಧುರಸ್ವಪ್ನ’ ಚಿತ್ರವಂತೂ ದರ್ಶನ್ ಧ್ವನಿ ಹಾಗೂ ವಿತರಣೆ ವಿಚಾರಗಳಿಂದ ಭಾರೀ ಸುದ್ದಿ ಮಾಡಿತ್ತು. ಆದರೆ ಪ್ರೇಕ್ಷಕ ಮಹಾಪ್ರಭು ಟೋಟಲಿ ಚಿತ್ರವನ್ನು ತಿರಸ್ಕಾರ ಮಾಡಿದ್ದಾನೆ ಎನ್ನುವ ವರದಿಯೊಂದು ಬಹಿರಂಗವಾಗಿದೆ.
ಕರಾವಳಿಯ ಅಪ್ಪಟ ಪ್ರತಿಭೆ ಅರ್ಜುನ್ ಕಾಪಿಕಾಡ್ ಈ ಚಿತ್ರದ ಮೂಲಕ ಕನ್ನಡ ಸಿನಿಮಾ ಅಂಗಳದಲ್ಲಿ ಬೆಳೆದು ನಿಲ್ಲುತ್ತಾರೆ ಎನ್ನುವ ಮಾತು ಮತ್ತೆ ಹುಸಿಯಾಗಿದೆ. ಬರೀ ತುಳು ಚಿತ್ರಗಳಲ್ಲಿ ಮಾತ್ರ ನಾಯಕರಾಗುವ ಚಾನ್ಸ್ ಅರ್ಜುನ್ಗೆ ಒಲಿಯಲಿದೆ ಎನ್ನುವ ಮಾತು ಚಿತ್ರ ನೋಡಿಕೊಂಡು ಹೊರಬಂದವರಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ.