ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಜೈಲಿನಲ್ಲಿ ಕೂತು ಸಂಜು ಬಾಬಾ ಮಾಡಿದ್ದೇನೂ ಗೊತ್ತಾ..?

ಕಷ್ಟಗಳನ್ನು ಎದುರಿಸಿದಾಗ ಎಂತಹ ಮನುಷ್ಯನೂ ಮಾಗುತ್ತಾನೆ. ನಟ ಸಂಜಯದತ್‌ ಕೂಡಾ ಜೈಲು ಜೀವನದಿಂದ ಬಹಳ ಕಲಿತಂತೆ ಕಾಣುತ್ತಿದೆ. ಅದಕ್ಕೆ ಅವರ ನಡೆ, ನುಡಿಯೇ ಸಾಕ್ಷಿ .

ಜೈಲಿನಲ್ಲಿದ್ದಾಗ ಸಂಜಯ್‌ ದತ್ ಅಲ್ಲಿಯ ಇತರ ಸಾಮಾನ್ಯ ಕೈದಿಗಳ ಒಡನಾಟದಲ್ಲಿ ಜೀವನದ ದೃಷ್ಟಿ ಕೋನವನ್ನೇ ಬದಲಾಯಿಸಿಕೊಂಡಿದ್ದಾರೆ ಎನಿಸುತ್ತೆ. ಜೈಲಿನಲ್ಲಿ ಸಮೀರ್, ಜಿಷಾನ್ ಎನ್ನೋ ಕೈದಿಗಳಿಂದ ಸ್ಪೂರ್ತಿಗೊಂಡ ಸಂಜು ಬಾಬಾ ಕವಿಯಾಗಿದ್ದಾರೆ. ‘ತಾವೀಗ ಕವಿ’ ಎಂದು ಹೇಳಿಕೊಂಡಿರುವ ಸಂಜಯ್ ಸುಮಾರು 500 ಕವಿತೆಗಳನ್ನು ಬರೆದಿದ್ದಾರಂತೆ. ಶೀಘ್ರದಲ್ಲೇ ಸಂಜಯ್ ತಮ್ಮ ಕವಿತೆಗಳ ಸಂಕಲನವನ್ನು ಪಬ್ಲಿಷ್ ಮಾಡುತ್ತಾರಂತೆ.

ಇದೇ ವೇಳೆ, ಜೈಲಿನಲ್ಲಿ ಪರಿಚಿತನಾದ ಕೈದಿಯೋರ್ವರ ಜೀವನವನ್ನು ಚಿತ್ರವಾಗಿಸಲು ಕೂಡಾ ಸಂಜಯ್ ಯೋಜಿಸುತ್ತಿದ್ದಾರಂತೆ. ಒಂದೆಡೆ ತಮ್ಮ ಜೀವನ ಕುರಿತು ಬಾಲಿವುಡ್‌ನಲ್ಲಿ ಸಿನಿಮಾ ರೂಪುಗೊಳ್ಳುತ್ತಿದ್ದರೆ, ಇನ್ನೊಂದೆಡೆ ಸಂಜಯ್ ಕವಿಯಾಗುತ್ತಿದ್ದಾರೆ. ಜೊತೆ ಜೊತೆಗೆ ಕೈದಿಯೋರ್ವರ ಸಿನಿಮಾ ನಿರ್ಮಿಸಲು ಹೊರಟಿದ್ದಾರೆ.

ಒಟ್ಟಾರೆ ಸಂಜಯ್ ಅವರ ಈವರೆಗಿನ ಜೀವನ, ಜೀವನ ಶೈಲಿಗೆ ಹೋಲಿಸಿದರೆ ಮುಂದಿನ ಜೀವನ ಸಂಪೂರ್ಣ ಭಿನ್ನವಾಗಿರುತ್ತೆ ಎಂಬುದು ಸ್ಪಷ್ಟ.