ದೇಶದ ಪ್ರಧಾನಿ ನರೇಂದ್ರ ಮೋದಿ ಕ್ಲೀನ್ ಇಮೇಜ್ಗೆ ದೊಡ್ಡ ಕಪ್ಪು ಚುಕ್ಕೆಯೊಂದು ಅಂಟಿಕೊಂಡಿದೆ. ದೊಡ್ಡ ಮಟ್ಟದಲ್ಲಿ ಪ್ರಧಾನಿ ಮೋದಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದು ಬೇರೆ ಯಾರು ಅಲ್ಲ ಕಾಂಗ್ರೆಸ್ ಪಕ್ಷ.
ಗುಜರಾತ್ನ ಮುಖ್ಯ ಮಂತ್ರಿ ಆನಂದಿ ಬೇನ್ ಅವರ ಸುಪತ್ರಿ ವಿಚಾರದಲ್ಲಿ ಮೋದಿ ಉದಾರತೆ ತೋರಿಸುವ ಮೂಲಕ ನೇರವಾಗಿ ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ ಎನ್ನುವ ಮಾತನ್ನು ಕಾಂಗ್ರೆಸ್ ಪಕ್ಷ ಶುಕ್ರವಾರ ಹೇಳಿಕೊಂಡಿದೆ. ೨೫೦ ಎಕರೆಯಷ್ಟು ಭೂಮಿಯನ್ನು ವೈಲ್ಡ್ ವುಡ್ ಕಂಪನಿಗೆ ಕೊಡಲಾಗಿದೆ.
ಈ ಕಂಪನಿಯಲ್ಲಿ ಪಾಲುದಾರರಾಗಿ ಆಣಂದಿ ಬೆನ್ ಅವರ ಸುಪ್ರಿ ಅನಾರಾ ಬೇನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಿಜಕ್ಕೂ ಈ ಭೂಮಿಯ ಮೌಲ್ಯ ೧೨೫ ಕೋಟಿ ಆದರೆ ಮೋದಿಯ ಪ್ರಭಾವದಿಂದ ಇದು ಬರೀ ೧.೫ ಕೋಟಿಗೆ ಕಂಪನಿಗೆ ಸಿಕ್ಕಿದೆ ಎನ್ನೋದು ಕಾಂಗ್ರೆಸ್ನ ವಾದ.