ಒಂದಲ್ಲ ಎರಡಲ್ಲ ೨೫ ಅಡಿ ಆಳದಲ್ಲಿ ಏನೂ ಇಲ್ಲದೇ ಬದುಕುವುದು ತೀರಾ ಕಷ್ಟಸಿಯಾಚಿನ್ನಲ್ಲಿ ನಡೆಯುತ್ತಿದ್ದ ಮೃತ ಯೋಧರ ಪತ್ತೆ ಕಾರ್ಯಾಚರಣೆ ವೇಳೆ 25 ಅಡಿ ಹಿಮದಲ್ಲಿ ಕರ್ನಾಟಕದ ಹನುಮಂತಪ್ಪ ಕೊಪ್ಪದ ಅವರು ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ.
ಸತತ ಆರು ದಿನಗಳ ಕಾಲ ಅಂದರೆ 144 ಗಂಟೆ 25 ಅಡಿ ಆಳದಲ್ಲಿ -45 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ಲ್ಯಾನ್ಸ್ ನಾಯಕ್ ಹನುಮಂತಪ್ಪ ಸಿಲುಕಿದ್ದರು. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಆರ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನುಮಂತಪ್ಪ ಕೊಪ್ಪದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಬೆಟದೂರಿನವರು.
ಇನ್ನು, ಸಿಯಾಚಿನ್ ಹಿಮಪಾತದಲ್ಲಿ ಹನುಮಂತಪ್ಪ ಕೊಪ್ಪದ, ಮೈಸೂರು ಮೂಲದ ಪಿ.ಎನ್.ಮಹೇಶ್ ಹಾಗೂ ಹಾಸನ ತೇಜೂರಿನ ಸುಬೇದಾರ್ ನಾಗೇಶ್ ಸೇರಿ 10 ಜನ ಯೋಧ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿತ್ತು. ಆದರೆ, ಇವರ ಪೈಕಿ ಹನುಮಂತಪ್ಪ ಜೀವಂತ ಪತ್ತೆಯಾಗಿ ಮರುಜನ್ಮ ಪಡೆದಿದ್ದಾರೆ.