ಮನುಷ್ಯ ಬಯಸಿದರೆ ನಾಳೆನೇ ಮೇಕೆ ಸಾವು ಬಂದು ಬಿಡಬಹುದು.
ಈ ಘಟನೆ ನಡೆದಿದ್ದು ಛತ್ತೀಸ್ಘಡ್ನ ಕೊರಿಯಾ ಎಂಬಲ್ಲಿ. ಮೇಕೆಯ ಹೆಸರು ತಿಳಿದಿಲ್ಲ. ಆದ್ರೆ ಇದರ ಯಜಮಾನನ ಹೆಸರು ಅಬ್ದುಲ್ ಹಾಸನ್.
ಅಬ್ದುಲ್ ಹಾಸನ್ ಅವರ ಮೇಕೆ ಜಡ್ಜ್ ಹೇಮಂತ್ ರಾತ್ರೆಯವರ ಬಂಗಲೆಗೆ ನುಗ್ಗಿ ಅಲ್ಲಿಯ ಉದ್ಯಾನದಲ್ಲಿನ ತರಕಾರಿ ಸೊಪ್ಪನ್ನು ತಿಂದು ಹಾಕುತ್ತಿತ್ತಂತೆ. ಬೆಳೆಗಳನ್ನು ನಾಶ ಮಾಡುತ್ತಿತ್ತಂತೆ. ಹಲವು ದಿನಗಳಿಂದ ನಡೆದಿದ್ದ ಮೇಕೆಯ ಉಪಟಳ ಕುರಿತಂತೆ ತೋಟದ ಗಾರ್ಡನ್ ಅಬ್ದುಲ್ ಹಾಸನ್ಗೆ ಎಚ್ಚರಿಸಿದ್ದ. ಆದ್ರೂ ಮೇಕೆ ಪದೇ ಪದೇ ಉದ್ಯಾನಕ್ಕೆ ನುಗ್ಗಿತ್ತಿತ್ತು ಎನ್ನಲಾಗಿದೆ.
ಕೊನೆಗೆ ಸಿಟ್ಟಿಗೆದ್ದ ಜಡ್ಜ್ ಹೇಮಂತ್ ರಾತ್ರೆ ಮೇಕೆ ಮತ್ತದರ ಮಾಲೀಕನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಅಂತೆಯೇ ಪೊಲೀಸರು ಮೇಕೆ ಮತ್ತದರ ಮಾಲೀಕ ಅಬ್ದುಲ್ ಹಾಸನ್ ಅವರನ್ನು ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಮೇಕೆಗೆ ಜಾಮೀನು ನೀಡಿದೆ. ಇನ್ನು ಅಬ್ದುಲ್ ಹಾಸನ್ ಕೂಡಾ ಜಾಮೀನಿಗಾಗಿ ಅರ್ಜಿ ಹಾಕಿದ್ದು ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾನೆ.