ದೊಡ್ಡ ಸುದ್ದಿ

ಬದುಕಿ ಬರ್ತೀನಿ ಅಂದಿದ್ದ ಮಗ ಬರಲಿಲ್ಲ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ನಿವಾಸಿ ಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅಂಗಾಗ ವೈಫಲ್ಯದಿಂದಾಗಿ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 11.45ರ ಸುಮಾರಿಗೆ ವಿಧಿವಶರಾಗಿದ್ದಾರೆ.

ಆಸ್ಪತ್ರೆಗೆ ದಾಖಲು ಮಾಡಿದಾಗಿನಿಂದಲೂ ಅವರ ಮೆದುಳು, ಕಿಡ್ನಿ ಹಾಗೂ ಲಿವರ್ ನಿಷ್ಕ್ರೀಯವಾಗಿತ್ತು. ಕಳೆದ ಮೂರು ದಿನಗಳಿಂದ ನುರಿತ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ಕಳೆದ ವಾರ ಸಿಯಾಚಿನ್‌ ಹಿಮತಾಪದಲ್ಲಿ 10 ಜನ ಯೋಧರ ಜೊತೆ ಕರ್ನಾಟಕದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಕೂಡ ಹಿಮಪ್ರದೇಶದಲ್ಲಿ 35 ಅಡಿ ಆಳಕ್ಕೆ ಸಿಲುಕಿದ್ದರು. ಆದರೆ ಪವಾಡವೆಂಬಂತೆ ಹನುಮಂತಪ್ಪ ಬದುಕುಳಿದಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವೀರಮರಣವನ್ನಪ್ಪಿದ್ದಾರೆ.