ಪ್ರೀತಿ ಎಂದಿಗೂ ಸೌಂದರ್ಯವನ್ನು ಲೆಕ್ಕ ಹಾಕೋದಿಲ್ಲ. ಏನೇ ಇರಲಿ ಪ್ರೀತಿಯ ಹಕ್ಕಿಯೊಂದು ರೆಕಜ್ಕೆ ಬಿಚ್ಚಿಕೊಂಡು ಸ್ವಚ್ಛಂಧ ಜಗತ್ತಿನಲ್ಲಿ ಹಾರುವ ಕನಸ್ಸು ಕಾಣುತ್ತದೆ. ಇಂತಹ ಒಂದು ಅಪರೂಪದ ಪ್ರೀತಿಯ ಕತೆ ನಿಮ್ಮ ಮುಂದೆ ಇಟ್ಟಿದ್ದೇವೆ. ಪ್ರೀತಿ ದಿನಕ್ಕೊಂದು ಪ್ರೇಮಿಗಳ ಅಪರೂಪದ ಕಥನದ ಅನಾವರಣ ಇಲ್ಲಿ ನಡೆದಿದೆ.
ಪತ್ರಕರ್ತ ಅಲೋಕ್ ಹಾಗೂ ಲಕ್ಷ್ಮಿಯ ಪ್ರೀತಿ ಕೂಡ ಅದೇ ಮಾದರಿಯದ್ದು, ಮಹಿಳೆಯರ ಹಕ್ಕು ಹಾಗೂ ರಕ್ಷಣೆಯ ದೃಷ್ಟಿಯಿಂದ ಅಲೋಕ್ ತಮ್ಮ ನೌಕರಿಯನ್ನೇ ಕಿತ್ತು ಹಾಕಿ ಹೊರಬಂದವರು. ೧೫ರ ಹರೆಯಲ್ಲಿ ಲಕ್ಷ್ಮೀಯ ಮೇಲೆ ಆಸಿಡ್ ದಾಳಿ ನಡೆಯಿತು. ಈ ಬಳಿಕ ಲಕ್ಷ್ಮೀಯ ಬದುಕೇ ಕತ್ತಲೆ ಕೋಣೆಯಲ್ಲಿ ಇಟ್ಟ ದೀಪದಂತೆ ಪ್ರಜ್ವಲಿಸತ್ತಿತ್ತು. ಆಸಿಡ್ ದಾಳಿಯಿಂದ ಲಕ್ಷ್ಮೀ ಕೈ ಹಾಗೂ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಅವಳು ಮದುವೆಯಾಗದೆ ಒಂಟಿಯಾಗಿ ಬದುಕು ಕಟ್ಟಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದಳು.
ಈ ಸಮಯದಲ್ಲಿ ಪತ್ರಕರ್ತ ಅಲೋಕ್ ಅವಳ ಕೈ ಹಿಡಿದು ಹೊಸ ಬದುಕು ಕಟ್ಟುವ ಧೈರ್ಯ ತುಂಬಿದರು. ಅಂದಹಾಗೆ ಅಲೋಕ್ ಹೇಳುವ ಮಾತು ಕೇಳಿ ‘ ಲಕ್ಷ್ಮೀ ನನ್ನ ಪಾಲಿನ ಸೌಂದರ್ಯದ ಗಣಿ. ಅವಳ ಸೌಂದರ್ಯ ನನ್ನ ಮನಸ್ಸಿನ ಮೂಲೆಯಲ್ಲಿ ಭದ್ರವಾಗಿ ಅಚ್ಚೊತ್ತಿದೆ. ಇದೇ ನಮ್ಮ ಪ್ರೀತಿಯ ಸಂಕೇತವಾಗಿ ನಮಗೊಬ್ಬಳು ಮಗಳು ಪೀಹೂ ಇದ್ದಾಳೆ. ಬದುಕಿನಲ್ಲಿ ಪ್ರೀತಿ ಎಂದರೆ ಅದು ನನ್ನ ಲಕ್ಷ್ಮೀ ಎನ್ನುವುದು ಅವರ ಮಾತು.