ಬನಾರಸ್ನಲ್ಲಿ ಇಂತಹದೊಂದು ಘಟನೆ ನಡೆದಿದೆ ಅಂದ್ರೆ ಅದನ್ನ ನೀವು ನಂಬಲೂ ಸಾಧ್ಯವಿಲ್ಲ. ಬನಾರಸ್ನಲ್ಲಿ 26 ವರ್ಷದ ದಿಪೇಶ್ ಪಾಂಡೆ ಎಂಬ ಯುವಕನಿಗೆ ಏಳು ಯುವತಿಯರು ಸೇರಿ ಚುಡಾಯಿಸಿದ್ದಾರೆ.
ಹೌದು, ಈ ಯುವತಿಯರ ಕಾಟದಿಂದ ತಪ್ಪಿಸಿಕೊಂಡ ದಿಪೇಶ್ ಸಮೀಪದ ಡಿರೆಕಾ ಠಾಣೆಗೆ ಹೋಗಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಪೊಲೀಸರೂ ಸಹ ಈತನ ಮಾತನ್ನ ನಂಬಿಲ್ಲ. ಬಳಿಕ ಪೊಲೀಸರೇ ಖುದ್ದು ದಿಪೇಶ್ನನ್ನು ಕರೆದುಕೊಂಡು ಘಟನೆ ನಡೆದ ಸೂರ್ಯ ಸರೋವರ್ಗೆ ತೆರಳಿದ್ದಾರೆ.
ಬಳಿಕ ದಿಪೇಶ್ಗೆ ಕಾಟ ಕೊಟ್ಟ ಏಳು ಜನ ಯುವತಿಯರನ್ನು ಕಸ್ಟಡಿಗೆ ತೆಗೆದುಕೊಂಡು, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ನಡೆದೆದ್ದಲ್ಲವನ್ನು ಯುವತಿಯರು ಬಾಯ್ಬಿಟ್ಟಿದ್ದಾರೆ. ಬಳಿಕ ಯುವತಿಯರ ಪೋಷಕರನ್ನು ಕರೆದು ಎಚ್ಚರಿಕೆ ನೀಡಿ ಯುವತಿಯರನ್ನು ಕಳಿಸಿದ್ದಾರೆ.
ಆ ಯುವತಿತಯರು ದಿಪೇಶ್ಗೆ ಎಷ್ಟು ಚುಡಾಯಿಸಿದರೆಂದರೆ ಆತ ತನ್ನ ಬೈಕ್ನ್ನೇ ಬಿಟ್ಟು ಪರಾರಿಯಾಗಿದ್ದ. ಒಂದು ವೇಳೆ ಕಿರುಚಾಡಲು ಪ್ರಾರಂಭಿಸಿದರೆ ನಿನ್ನ ಮೇಲೆ ಸುಳ್ಳು ಆರೋಪವನ್ನು ಮಾಡಿ ಒಳಗೆ ಹಾಕಿಸುತ್ತೇವೆ ಎಂದು ಯುವತಿಯರು ಬೆದರಿಕೆಯನ್ನೂ ಹಾಕಿದ್ದರು. ಈ ಏಳು ಯುವತಿಯರು ರಾಜಸ್ಥಾನವರೆಂದು ಹೇಳಲಾಗಿದೆ.