ಈ ಬಾರಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ರಾಯಭಾರಿಗಳಾಗೋದಕ್ಕೆ ಶರ್ಮಿಳಾ ಮಾಂಡ್ರೆ ಮತ್ತು ಪಾರ್ವತಿ ನಾಯರ್ಗೆ ಅವಕಾಶ ಸಿಕ್ಕಿದೆ. ಈ ಹಿಂದೆ ಈ ತಂಡದ ರಾಯಭಾರಿಗಳಾಗಿ ಮಾಧುರಿ ಭಟ್ಟಾಚಾರ್ಯ, ಐಂದ್ರಿತಾ ರೇ ಸೇರಿದಂತೆ ಹಲವರಿಗೆ ಅವಕಾಶ ಸಿಕ್ಕಿತ್ತು. ಈ ವರ್ಷ ಅಂಥದ್ದೊಂದು ಅವಕಾಶ ಶರ್ಮಿಳಾ ಮಾಂಡ್ರೆ ಮತ್ತು ಪಾರ್ವತಿ ನಾಯರ್ಗೆ ಸಿಕ್ಕಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡವು ಎಲ್ಲೆಲ್ಲಿ, ಯಾವ ಯಾವ ಟೀಂ ಜೊತೆಗೆ ಪಂದ್ಯ ಆಡುತ್ತದೋ, ಅಲ್ಲೆಲ್ಲಾ ಶರ್ಮಿಳಾ ಮತ್ತು ಪಾರ್ವತಿ ಇದ್ದು, ತಂಡವನ್ನು ಹುರಿದುಂಬಿಸುವ ಜವಾಬ್ದಾರಿ ನೀಡಲಾಗಿದೆ. ಈಗ ಸಿಕ್ಕಿರೋ ಅವಕಾಶದಿಂದಾದ್ರೂ ಇವರ ಸಿನಿಮಾ ಲೈಫ್ಗೆ ಹೊಸ ಟರ್ನ್ ಸಿಗುತ್ತೋ ಅಂತ ಕಾದು ನೋಡಬೇಕು.