ಸಿನಿಮಾ ಸುದ್ದಿ

ಮತ್ತೆ ಯಾಕೆ ಬಂದು ತುಳುವಿನ ರಂಗ್ !

ಕೋಸ್ಟಲ್‌ವುಡ್ ಸಿನಿಮಾ ನಗರಿಯಲ್ಲಿ ಒಂದು ಚಿತ್ರ ಬಿಡುಗಡೆಯಾದರೆ ಮತ್ತೆ ಎಂದಿಗೂ ಥಿಯೇಟರ್ ಅಂಗಳಕ್ಕೆ ಜಿಗಿದ ಉದಾಹರಣೆಗಳೇ ಕಾಣಲು ಸಿಗೋದು ತೀರಾ ಅಪರೂಪ. ಆದರೆ ಈ ವರ್ಷದ ಆರಂಭದಲ್ಲಿಯೇ ತುಳುವಿನಲ್ಲಿ ಇಂತಹ ಬೆಳವಣಿಗೆಯೊಂದು ದಾಖಲಾಗಿದೆ.
ಅದೇನಪ್ಪಾ ಅಂದರೆ ಕಳೆದ ವರ್ಷ ಬಿಡುಗಡೆಯಾಗಿ ಸಾಧಾರಣ ಓಟ ದಾಖಲಿಸಿದ ‘ರಂಗ್’ ಮತ್ತೆ ಮಂಗಳೂರಿನ ಜ್ಯೋತಿ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಅರೇ. ಯಾಕೆ ಮತ್ತೆ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಕೇಳಿದರೆ ಬಹಳಷ್ಟು ಮಂದಿಯಲ್ಲಿ ಉತ್ತರವಿಲ್ಲ. ಅದರಲ್ಲೂ ಮುಖ್ಯವಾಗಿ ‘ರಂಗ್’ ಚಿತ್ರ ತಂಡದವರಲ್ಲಿಯೂ ಕೇಳಿದರೆ ಇದಕ್ಕೆ ಉತ್ತರ ಸಿಗುತ್ತಿಲ್ಲ. ಕರಾವಳಿಯ ಗಲ್ಲಿಯಲ್ಲಿ ಸಿನಿಮಾ ನೋಡುವ ಮಂದಿಯಲ್ಲಿ ಕೇಳಿದರೆ ಅವರು ಹೇಳುವ ಮಾತು ಒಂದೇ ಅವರಿಗೆ ತಲೆ ನೆಟ್ಟಗಿಲ್ಲ ಮಾರಾಯ್ರೆ.
ತುಳುವಿನಲ್ಲಿ ಈಗಲೇ ಎರಡು ಚಿತ್ರಗಳು ಓಡ್ತಾ ಇದೆ. ಅದರ ಜತೆಯಲ್ಲಿ ‘ಪವಿತ್ರ’ ಎನ್ನುವ ಚಿತ್ರನೂ ಬರುತ್ತಿದೆ. ಎರಡನೇ ವಾರದಲ್ಲಿ ‘ಕುಡ್ಲ ಕೆಫೆ’ ತೆರೆಗೆ ಬರುತ್ತಿದೆ. ಈ ಮೂಲಕ ಥಿಯೇಟರ್ ಸಮಸ್ಯೆಯಂತೂ ಈ ರಂಗ್‌ನಿಂದ ಉಂಟಾಗುವುದು ಗ್ಯಾರಂಟಿಯಾಗಿದೆ. ರಂಗ್ ಚಿತ್ರ ಪ್ರಭಾತ್ ಎನ್ನುವ ಪುಟ್ಟ ಥಿಯೇಟರ್‌ನಲ್ಲಿ ನೂರು ದಿನ ಓಡಿದೆ. ಈ ಮೂಲಕ ಮಂಗಳೂರಿನ ಬಹುತೇಕ ಮಂದಿ ಚಿತ್ರ ನೋಡಿದ್ದಾರೆ ಎಂದಾಯಿತು. ಹಾಗಾದರೆ ಮತ್ತೆ ರಿಲೀಸ್ ಯಾಕೆ ಅಂತೀರಾ…?