ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಅಭಿಮಾನಿಗಾಗಿ ರಿಕ್ಷಾ ಹೊಡೆದ ಟಾಲಿವುಡ್ ಹೀರೊ

ತೆಲಂಗಾಣದ ಖಮ್ಮಂನ ಆರು ವರ್ಷದ ಬಾಲಕ ಅಶ್ವಿತ್‌ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತನಿಗೆ ನಟ ಅಖಿಲ್‌ನನ್ನು ನೋಡುವ ಆಸೆ. ಈ ವಿಷಯ ಅಖಿಲ್‌ಗೆ ತಿಳಿದಿದೆ. ಅಂತೆಯೇ ಅಖಿಲ್ ಇಂದು ಖಮ್ಮಂಗೆ ಹೋಗಿ ಬಾಲಕ ಅಶ್ವಿತ್‌ನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಅಖಿಲ್ ಖಮ್ಮಂ ನಗರದಲ್ಲಿ ಆಟೋ ಓಡಿಸಿದ್ದಾರೆ.  ಪ್ರಯಾಣಿಕರಿಂದ ಸಂಗ್ರಹವಾದ 3 ಸಾವಿರ ರೂಪಾಯಿಗಳನ್ನು ಬಾಲಕನ ಕುಟುಂಬಕ್ಕೆ ನೀಡಿದ್ದಾರೆ. ಇದರಿಂದ ಬಾಲಕ ಅಶ್ವಿನ್ ಸೇರಿದಂತೆ ಅವರ ಕುಟುಂಬ ಸಂತಸಗೊಂಡಿದೆ.

ಇನ್ನು ನಟಿ ಮಂಚು ಲಕ್ಷ್ಮಿ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಆ ಬಾಲಕನಿಗೆ 3 ಲಕ್ಷ ರೂ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.