ಸಿನಿಮಾ ಸುದ್ದಿ

ತುಳುವಿನ ದೇವದಾಸ್ ನಾಟಕ ನಿಲ್ಲಿಸಿ ಬಿಟ್ರು!

ಕರಾವಳಿಯಲ್ಲಿ ನಾಟಕಗಳಿಗೆ ಅದರಲ್ಲೂ ಕಂಪನಿಯ ಹಾಸ್ಯ ನಾಟಕಗಳಿಗೆ ಬೇಡಿಕೆಯಂತೂ ಎಲ್ಲೇ ಮೀರಿ ಇದೆ. ಕರಾವಳಿಯ ಸಿಟಿ ಬಿಡಿ. ಹಳ್ಳಿಯಲ್ಲೂ ನಾಟಕ ಇದೆ ಎಂದರೆ ಅಲ್ಲಿ ಪಕ್ಕದಲ್ಲಿರುವ ಸಿನಿಮಾ ಮಂದಿರಗಳಿಗೆ ಜನ ಕಡಿಮೆ ಪ್ರಮಾಣದಲ್ಲಿ ಹೋಗಿ ನಾಟಕಗಳಿಗೆ ಮೂಗಿ ಬೀಳುತ್ತಿದ್ದರು.
ಕರಾವಳಿಯ ದೇವದಾಸ್ ಕಾಪಿಕಾಡ್, ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಕಿಶೋರ್ ಶೆಟ್ಟಿ ಹೀಗೆ ನಾನಾ ನಾಟಕಗಳ ಕಂಪನಿಗಳು ಒಂದ್ ಕಾಲದಲ್ಲಿ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ತುಳು ಚಿತ್ರಗಳು ಥಿಯೇಟರ್ ತುಂಬಿದ ನಂತರವಂತೂ ನಾಟಕಗಳಿಗೆ ಬೇಡಿಕೆ ಕುಸಿದು ಬಿಟ್ಟಿದೆ. ಮುಖ್ಯವಾಗಿ ಸಣ್ಣ ಪ್ರಮಾಣದ ಹಾಸ್ಯ ಕಾರ್ಯಕ್ರಮಗಳು ಬಂದ ನಂತರವಂತೂ ಕಂಪನಿ ನಾಟಕಗಳಿಗೆ ಬೇಡಿಕೆಯೇ ಇಲ್ಲದೇ ಹೋಗಿದೆ.
ಇದರ ನಡುವೆ ನಾಟಕ ಕಂಪನಿಗಳಲ್ಲಿ ಒಂದು ಮರ್ಯಾದೆ ಉಳಿಸಿಕೊಂಡಿದ್ದ ಚಾಪರ್ಕ ನಾಟಕ ತಂಡವನ್ನು ಮುನ್ನಡೆಸುವ ದೇವದಾಸ್ ಕಾಪಿಕಾಡ್ ಈ ಬಾರಿ ತನ್ನ 50ನೇ ನಾಟಕ ಬಂಗಾರ್( ಬಂಗಾರ) ಸಂಪೂರ್ಣವಾಗಿ ನೆಲಕ್ಕೆ ಬಿದ್ದು ಬಿಟ್ಟಿದೆ. ಕಾಪಿಕಾಡ್ ನಾಟಕ ಎಂದರೆ ಮೊದಲೇ ಬುಕ್ ಆಗುತ್ತಿದ್ದ ಕಾಲಘಟ್ಟ ಈಗ ನಿಧಾನವಾಗಿ ಜಾರಿಕೊಂಡಿದೆ. ಬಂಗಾರ್ ನಾಟಕವಂತೂ ಕರಾವಳಿಯಲ್ಲಿ ಉಚಿತವಾಗಿಯೂ ತೋರಿಸುವ ಪ್ರಯತ್ನ ಪಟ್ಟರು ನೋಡುವ ಮಂದಿಯೇ ಕಾಣಲು ಸಿಗುತ್ತಿಲ್ಲ ಎನ್ನುವುದು ದೇವದಾಸ್‌ರ ಆಪ್ತರು ಹೇಳುವ ಮಾತು. ಮೊದಲ ಬಾರಿಗೆ ನಾಟಕ ಅಂಗಳದಲ್ಲಿ ಕಾಪಿಕಾಡ್ ಸೋತು ಸುಣ್ಣಾಗಿದ್ದಾರೆ ಎನ್ನುವ ನಿಜ ಗೊತ್ತಾದ ನಂತರ ದೇವ್ ಫುಲ್‌ಟೈಮ್ ತುಳು ಸಿನಿಮಾ ಅಂಗಳದಲ್ಲಿ ಉಳಿಯಬೇಕು ಎಂದು ನಿಶ್ಚಿಯಿಸಿದ್ದಾರೆ ಎಂದು ಮಾಹಿತಿಯೊಂದು ಹೊರಬಂದಿದೆ. ಈಗಾಗಲೇ ಚಂಡಿಕೋರಿ ಸಿನಿಮಾ ಓಡುತ್ತಿದೆ. ಇದರ ಜತೆಯಲ್ಲಿ ಬರ್ಸ ಕೂಡ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಹೊಸ ನಾಟಕಗಳು ದೇವದಾಸ್ ಅವರದ್ದು ಸಧ್ಯಕ್ಕೆ ಯಾವುದು ಇಲ್ಲ ಎನ್ನುವುದು ಅವರ ಆಪ್ತ ವಲಯದಲ್ಲಿಯೇ ಹರಡುತ್ತಿರುವ ಮಾತು.