ರಾಜ್ಯದ ಮೂರು ವಿಧಾನ ಸಭೆ ಕ್ಷೇತ್ರಗಳಾದ ಹೆಬ್ಬಾಳ, ಬೀದರ್ ಹಾಗೂ ದೇವದುರ್ಗದ ಫಲಿತಾಂಶವಂತೂ ಹೊರಬಂದಿದೆ. ಆದರೆ ಈ ಉಪ ಚುನಾವಣೆಯಲ್ಲಿ ನಿಜಕ್ಕೂ ಗೆದ್ದವರು ಯಾರು ಎನ್ನುವ ಪ್ರಶ್ನೆ ಎಲ್ಲ ಕಡೆ ಕಾಣ ಸಿಗುವ ಉತ್ತರ ಸಿಎಂ ಸಿದ್ಧರಾಮಯ್ಯ ಅವರು ಎನ್ನುವ ಮಾತು ಬರುತ್ತಿದೆ.
ಹೆಬ್ಬಾಳ ಕ್ಷೇತ್ರದಲ್ಲಿ ಜಾಫರ್ ಶರೀಫ್ ಅವರ ಮೊಮ್ಮಗ ರಹಮಾನ್ ಶರೀಫ್ ಅವರಿಗೆ ಟಿಕೆಟ್ ಸಿಗುವುದು ಡೌಟ್ ಇತ್ತು. ಸಿಎಂ ಅವರ ಆಪ್ತರೊಬ್ಬರಿಗೆ ಈ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಆದರೆ ಯುಪಿಎ ಸರಕಾರದಲ್ಲಿದ್ದ ಕೇಂದ್ರ ಮಂತ್ರಿ ಆಸ್ಕರ್ ಸೇರಿದಂತೆ ಹಿರಿಯರ ಕೃಪೆಯಿಂದ ಟಿಕೆಟ್ ಪಡೆದುಕೊಂಡು ಬಂದ ರೆಹಮಾನ್ ಅವರಿಗೆ ಕೊನೆಗೆ ಹೆಬ್ಬಾಳದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ ಸಿಎಂ ಸಿದ್ಧರಾಮಯ್ಯ ಈ ವಿಚಾರದಿಂದ ಬೇಸರಗೊಂಡಿದ್ದರು ಎನ್ನುವುದು ಓಪನ್ ಮಾತು. ಪರೋಕ್ಷ ರೀತಿಯಲ್ಲಿ ರೆಹಮಾನ್ ಸೋಲಿಗೆ ಸಿಎಂ ಕಾರಣರಾಗಿಬಹುದು ಎನ್ನುವ ಮಾತು ರಾಜಕೀಯ ಅಡ್ಡೆಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ.