ಹೊಸದಿಲ್ಲಿ: ಸರ್ದಾರ್ ಹೆಸರಿನಲ್ಲಿ ಹರಿದಾಡುವ ಜೋಕ್ಗಳಿಗೆ ಬ್ರೇಕ್ ಹಾಕಲು ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಪರಿಶೀಲಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಇಂಟರ್ನೆಟ್ನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ಸರ್ದಾರ್ಜಿ ಜೋಕ್ಸ್ಗೆ ಕಡಿವಾಣ ಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಟಿ.ಎಸ್ ಠಾಕೂರ್ ನೇತೃತ್ವದ ಪೀಠ ಸಮ್ಮತಿಸಿದೆ.
ಪಂಜಾಬ್, ಬಿಹಾರ ಮತ್ತು ಈಶಾನ್ಯ ರಾಜ್ಯಗಳಲ್ಲಿರುವ ಜನರನ್ನು ಕೀಟಲೆ ಮಾಡುತ್ತ ಹುಟ್ಟಿಕೊಳ್ಳುವ ಜೋಕ್ಗಳಿಗೆ ದಿಲ್ಲಿ ಗುರುದ್ವಾರ ಆಡಳಿತ ಮಂಡಳಿ ವಿರೋಧ ವ್ಯಕ್ತ ಪಡಿಸಿದೆ. ಅಲ್ಲದೆ ಯಾವುದೇ ಸಮುದಾಯವನ್ನು ಅವಮಾನಿಸುವ ಈ ರೀತಿಯ ಜೋಕ್ಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ತಡೆಯಲು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದೆ. ಸರ್ದಾರ್ ಜೋಕ್ಸ್ ತಡೆಯುವ ಸಂಬಂಧ ಆರು ತಿಂಗಳೊಳಗೆ ಮಾರ್ಗದರ್ಶಿ ಸೂತ್ರ ರಚಿಸಲು ಸಲಹೆ ನೀಡುವಂತೆ ಕೋರಿ ಹರ್ವಿಂದರ್ ಸಿಂಗ್ ಎನ್ನುವವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.