ಕೋಸ್ಟಲ್ವುಡ್ ಅಂಗಳದ ಲೆಕ್ಕಚಾರ ಎಲ್ಲವೂ ಈಗ ಸರಿಯಿಲ್ಲ. ತಿಂಗಳಿಗೆ ಒಂದೆರಡು ಸಿನಿಮಾಗಳು ಥಿಯೇಟರ್ ಬಾಗಿಲು ಬಡಿಯುತ್ತಾ ಇದೆ. ಆದೆ ಚಿತ್ರಗಳ ಅಸಲಿಯತ್ತು ಮಾತ್ರ ಬೇರೆಯೇ ಇದೆ ಎನ್ನುವ ಮಾತುಗಳು ಗಲ್ಲಿಯಲ್ಲಿ ರೆಕ್ಕೆ ಬಿಚ್ಚಿಕೊಂಡು ಹಾರಾಡುತ್ತಿದೆ. ಅದೇನು ಇದ್ರೂ ತುಳು ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಎನ್ನುವ ಟ್ಯಾಗ್ಲೈನ್ ಇಟ್ಟುಕೊಂಡಿರುವ ಧನರಾಜ್ ಜುಗಾರಿ ವಿಚಾರದಲ್ಲಿ ಸಂಪೂರ್ಣವಾಗಿ ನೆಲಕ್ಕೆ ಬಿದ್ದಿದ್ದಾರೆ ಎನ್ನುವ ಮಾತುಗಳು ಕೋಸ್ಟಲ್ವುಡ್ ಅಂಗಳದಲ್ಲಿ ಕೇಳಲು ಆರಂಭವಾಗಿದೆ.
ಅಂದಹಾಗೆ ಜುಗಾರಿ ಎಂದರೆ ಯಾವುದೇ ಆಟವಲ್ಲ ಸ್ವಾಮಿ. ಇದೊಂದು ಪಕ್ಕಾ ತುಳು ಸಿನಿಮಾ. ಇದರ ನಿರ್ಮಾಪಕರು ಎರಡು ಮಂದಿ ಒಬ್ಬರು ಪಮ್ಮಿ ಕೊಡಿಯಾಲ್ಬೈಲ್ ಹಾಗೂ ಇನ್ನೊಬ್ಬರು ಧನರಾಜ್. ಈಗಾಗಲೇ ಧನರಾಜ್ ತುಳುವಿನಲ್ಲಿ ಕೋಟಿ ಚೆನ್ನಯ ಸಿನಿಮಾ ಮಾಡಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಪೂಜಾ ಗಾಂಧಿಯನ್ನು ತುಳುವಿನಲ್ಲಿ ಸಿನಿಮಾ ಮಾಡಿ ತೋರಿಸುತ್ತೇನೆ ಎಂದು ಹಟ ತೊಟ್ಟು ಅತ್ತಾ ಸಿನಿಮಾನೂ ಮಾಡದೇ ಪೂಜಾ ಗಾಂಧಿಯನ್ನು ಕಾರಿನಲ್ಲಿ ಮಂಗಳೂರಿನ ತುಂಬಾ ಸುತ್ತಾಡಿಸಿಕೊಂಡು ಬಳಿಕ ಬರೀ ಫೋಟೋ ಶೂಟ್ ಮಾಡಿಸಿ ಬಾಯ್ ಬಾಯ್ ಹೇಳಿದ ಅಸಾಮಿಯೇ ಈ ಧನರಾಜ್ ಎನ್ನುವುದು ಅವರ ಪುಟ್ಟ ಪರಿಚಯ.
ಜುಗಾರಿ ಸಿನಿಮಾ ಕೂಡ ಅರ್ಧ ಶೂಟಿಂಗ್ ಮುಗಿಸಿಕೊಂಡು ಮತ್ತೆ ಮಲಗಿಕೊಂಡಿದೆ. ಚಿತ್ರ ಯಾವಾಗ ಸಂಪೂರ್ಣ ಮಾಡುತ್ತೀರಿ ಎಂದರೆ ಹಣ ಕಡಿಮೆ ಇದೆ ಸ್ವಾಮಿ. ಹಣ ಬಂದಾಗ ಸಿನಿಮಾ ಮಾಡೋಣ ಎಂದು ಧನರಾಜ್ ಜಾರಿಕೊಂಡಿದ್ದಾರೆ. ಇನ್ನೊಂದು ಕಡೆಯಲ್ಲಿ ಜುಗಾರಿಯಿಂದ ಅಂದರೆ ಸಿನಿಮಾದಿಂದಲೇ ಎಲ್ಲವನ್ನು ಕಳೆದುಕೊಂಡೆ ಎಂದು ಧನರಾಜ್ ಹೇಳಿಕೊಂಡು ಬರುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಲು ಆರಂಭವಾಗಿದೆ. ಟೋಟಲಿ ಧನರಾಜ್ ಅತ್ತ ಬೀರೆ ದೇವು ಪೂಂಜೆ ಸಿನಿಮಾನೂ ನೆಟ್ಟಗೆ ಮಾಡಿಲ್ಲ ಮತ್ತೊಂದೆಡೆ ಜುಗಾರಿಯನ್ನು ಕೂಡ ಅರ್ಧಕ್ಕೆ ಮುಗಿಸಿ ಉಂಡು ಹೋಗಿದ್ದಾರೆ.