ಹುಡುಗಿ ಜತೆ ಲಿಪ್ಲಾಕ್ ಮಾಡಿದ್ರೆ ಏನೂ ಆಗುತ್ತಿರಲಿಲ್ಲ. ಆದರೆ ಆತ ಮಾಡಿದ್ದು ತಂದೆಯ ಜತೆಗೆ ಮಾಡಿದ್ದು ವಿಶೇಷ ಸುದ್ದಿಯಾಗಿದೆ.
ಕಾರ್ಕಳದ ನಿವಾಸಿ ನಾರಾಯಣ ಪೂಜಾರಿ ರಾತ್ರಿ ಮಲಗಿದ್ದರು. ತಡ ರಾತ್ರಿ ವಿಪರಿತ ಮದ್ಯ ಸೇವಿಸಿಕೊಂಡು ಬಂದ ಮಗ ಸಂತೋಷ್, ನಿದ್ದೆಯಲ್ಲಿದ್ದ ತಂದೆಯನ್ನು ಎಚ್ಚರಿಸಿದ್ದ. ಅಷ್ಟೇ ಅಲ್ಲ ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ಗಲಾಟೆಗೆ ನಿಂತ. ಪ್ರತಿಭಟಿಸಿದ ತಂದೆಯ ತುಟಿಯನ್ನು ಕಚ್ಚಿ ಬಿಟ್ಟ.
ಬಳಿಕ ಓಡೋಡಿ ಹೋದ ಆತ ಭೂತಸ್ಥಾನದಲ್ಲಿರುವ ಕಡ್ತಸಳೆ(ಕತ್ತಿ)ಯನ್ನು ತಂದು ತಂದೆಗೆ ಹಿಗ್ಗಾಮುಗ್ಗ ಥಳಿಸಿದ. ಹರಿತ ವಿಲ್ಲದ ಕಾರಣ ವೃದ್ದನ ಮೈ-ಕೈ ಎಲ್ಲಾ ಪರಚು ಗಾಯವಾಗಿದೆ. ಅಷ್ಟಕ್ಕೆ ಬಿಡದೆ ಕೋಪಿತನಾಗಿ ಮತ್ತೆ ತಂದೆಯ ತುಟಿಗೆ ಕಚ್ಚಿ ಬಿಟ್ಟ. ಪರಿಣಾಮ ತುಟಿಯ ಮಾಂಸದ ತುಂಡು ಕಿತ್ತುಹೋಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೃದ್ದನ ರೋಧನ ನೆರೆಮನೆಯವರಿಗೆ ಕೇಳಿ ಬಂದ ಹಿನ್ನೆಲೆಯಲ್ಲಿ ಅವರೆಲ್ಲರೂ ಸೇರಿಕೊಂಡು ವೃದ್ದನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.