2015ರ ರಣಜಿ ಟ್ರೋಫಿ ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ್ಕ್ರಿಕೆಟ್ ವ್ಯವಹಾರಗಳನ್ನು ನೋಡಿಕೊಳ್ಳಲು ಕೋಟ್ ಮಧ್ಯಂತರ ಸಮಿತಿಯೊಂದನ್ನು ನೇಮಿಸಿತ್ತು ಆ ಸಮಿತಿಯ ಸಂಚಾಲಕರಾಗಿರುವ ಅಮೃತ್ ಮಾಥುರ್ಅವರಿಗೆ ದೂರವಾಣಿ ಕರೆ ಮಾಡಿದ್ದ ಕರ್ನಾಟಕದ ಬ್ಯಾಟಿಂಗ್ದಿಗ್ಗಜ ರಾಹುಲ್ದ್ರಾವಿಡ್ ‘ನಾಥು ಸಿಂಗ್ಮೇಲೆ ಒಂದು ಕಣ್ಣಿಟ್ಟಿರಿ, ಆತನಲ್ಲಿ ವಿಶೇಷ ಪ್ರತಿಭೆಯಿದೆ,’ ಎಂದು ಹೇಳಿದ್ದರು.
ರಾಜಸ್ಥಾನ್ರಾಯಲ್ ತಂಡದ ಮಾರ್ಗದರ್ಶಕರಾಗಿದ್ದ ಸಂದರ್ಭದಲ್ಲಿ ದ್ರಾವಿಡ್ ನಾಥು ಅವರ ಪ್ರತಿಭೆಯನ್ನು ಗುರುತಿಸಿದ್ದರು. “ಕೆಲ ಸಮಯದ ಹಿಂದೆ ದ್ರಾವಿಡ್ಸರ್ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅದು ನನ್ನ ಜೀವನದ ಅಮೂಲ್ಯ ಕ್ಷಣ. ನಿನ್ನಲ್ಲಿ ತುಂಬಾ ಪ್ರತಿಭೆಯಿದೆ. ಭಾರತ ಪರ ಆಡಬೇಕು. ನಿರಂತರ ಅಭ್ಯಾಸ ನಡೆಸುವಂತೆ ಹೇಳಿದ್ದರು,” ಎಂದು ನಾಥು ದ್ರಾವಿಡ್ಅವರಿಗೆ ಕೃತಜ್ಞತೆ ಸಲ್ಲಿಸಿದರು.
ನಾಥು ಸಿಂಗ್ ರಾವಲ್ಪಿಂಡಿ ಎಕ್ಪ್ರೆಸ್ ಖ್ಯಾತಿಯ ಶೋಯೆಬ್ಅಖ್ತರ್ಆದರ್ಶ. ಚೆನ್ನೈನ ಎಂಆರ್ಫ್ಪೇಸ್ಫೌಂಡೇಷನ್ ನಲ್ಲಿ ಗ್ಲೆನ್ಮೆಗ್ರಾತ್ ಅವರ ಗರಡಿಯಲ್ಲಿ ಪಳಗಿರುವ ನಾಥು, ಭಾರತ ತಂಡಕ್ಕೆ ಆಯ್ಕೆಯಾಗುವ ಕನಸಿನಲ್ಲಿದ್ದಾರೆ.
ನಾಥು ಸಿಂಗ್ರನ್ನು ಹುಡುಕಿದ್ದು ದ್ರಾವಿಡ್ !
