ಬೆಂಗಳೂರು: ಪ್ರತಿಷ್ಠೆಯಾಗಿದ್ದ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಿರೀಕ್ಷಿತ ಯಶಸ್ಸುದೊರಕದಿದ್ದರೂ, ಸಿಎಂ ಸಿದ್ದರಾಮಯ್ಯ ಪಾಳಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಸದ್ಯಕ್ಕಂತೂ ನಾಯಕತ್ವ ಬದಲಾವಣೆಯ ಪ್ರಶ್ನೆ ಉದ್ಭವಿಸದು ಎನ್ನುವ ಅಂಶವೇ ಈ
ಸಮಾಧಾನಕ್ಕೆ ಕಾರಣವಾಗಿದೆ.
ಪ್ರಾಯಶಃ ಹಿನ್ನಡೆಯಲ್ಲೂ ಮುನ್ನಡೆಯನ್ನು ಶೋಧಿಸುವ ಸ್ಪರ್ಧಾ ಮನೋಭಾವವೆಂದರೆ ಇದೇ ಇರಬಹುದು. ಈ ಚುನಾವಣೆಯಲ್ಲಿ ಕನಿಷ್ಠ 15ಜಿಪಂ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್, 10ರಲ್ಲಿ ಮಾತ್ರ ನಿಚ್ಚಳ ಬಹುಮತ ಗಳಿಸಿದೆ. ಆದರೆ, ರಾಜಕಾರಣದಲ್ಲಿ ಊಹೆಗೂ ನಿಲುಕದ ಲೆಕ್ಕಾಚಾರಗಳಿರುತ್ತವೆ. ಹಾಗಾಗಿ ಸ್ವತಃ ಸಿದ್ದರಾಮಯ್ಯ ಅವರೂ ಈ ಫಲಿತಾಂಶದಿಂದ ನಿರಾಳರಾಗಿದ್ದಾರೆ ಎನ್ನುತ್ತವೆ ಪಕ್ಷದ ಉನ್ನತ ಮೂಲಗಳು. ಜೆಡಿಎಸ್ ಮತ್ತು ಇತರರ ಬೆಂಬಲದಿಂದ ಕಾಂಗ್ರೆಸ್ಗೆ ಇನ್ನೂ 4-5 ಜಿಪಂಗಳಲ್ಲಿ ಅಧಿಕಾರ ಹಿಡಿಯುವ ಅವಕಾಶವಿದೆ. ಆಡಳಿತ ಪಕ್ಷವಾದ್ದರಿಂದ ಈ ಕೆಲಸ ಸುಲಭವೂ ಆಗಲಿದೆ.
ಸಿದ್ಧರಾಮಯ್ಯ ಸಿಎಂ ಕುರ್ಚಿ ಈ ಬಾರಿ ಅನ್ಸೇಫ್ ಯಾಕೆ ಗೊತ್ತಾ?
