ಕ್ರೀಡಾ ಸುದ್ದಿ

ಕ್ರೀಡಾಪಟುಗಳು ನಿವೃತ್ತಿ ಆಗ್ತಿದ್ದಂತೆ ಕೂಡಿಟ್ಟ ಹಣವನ್ನ ಏನ್ ಮಾಡ್ತಿದ್ದಾರೆ?

ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌, ಜಹೀರ್‌ ಖಾನ್‌ ಮತ್ತು ಭಾರತದ ಮಾಜಿ ಫುಟ್‌ಬಾಲ್‌ ಆಟಗಾರ ಬೈಚುಂಗ್‌ ಭುಟಿಯಾ ಕ್ರೀಡಾ ಪ್ರೇಮಿಗಳಿಗೆ ಚಿರಪರಿಚಿತ ಹೆಸರುಗಳು.

ಸಚಿನ್‌ ತೆಂಡೂಲ್ಕರ್‌

ಕ್ರಿಕೆಟ್‌ ಜಗತ್ತಿನ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ 2013ರ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿವೃತ್ತಿಯ ನಂತರ ಸಚಿನ್‌ ಭಾರತದ ಜನಪ್ರಿಯ ಫುಟ್‌ಬಾಲ್‌ ಟೂರ್ನಿಯಾದ ಐಎಸ್‌ಎಲ್‌ ತಂಡದ ಫ್ರಾಂಚೈಸಿಯಾಗಿದ್ದಾರೆ. ಐಎಸ್‌ಎಲ್‌ನ ಕೇರಳ ಬ್ಲಾಸ್ಟರ್‌ ತಂಡದ ಮಾಲಿಕರಾಗಿರುವ ತೆಂಡೂಲ್ಕರ್‌ ನಿವೃತ್ತಿಯ ನಂತರವೂ ಕ್ರೀಡೆಗೆ ಉತ್ತೇಜನ ನೀಡುವ ಕೆಲಸದಲ್ಲಿ ಕೈ ಜೋಡಿಸಿದ್ದಾರೆ.

ಸೌರವ್‌ ಗಂಗೂಲಿ

ಭಾರತ ಕ್ರಿಕೆಟ್‌ ತಂಡದ ಯಶಸ್ಸಿನ ನಾಯಕ ಎಂದೇ ಬಿಂಬಿತವಾಗಿರುವ ಬಂಗಾಳದ ಸೌರವ್‌ ಗಂಗೂಲಿ 2008ರ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವಿದಾಯ ಹೇಳಿದ್ದಾರೆ. ನಿವೃತ್ತಿಯ ಬಳಿಕ ಸೌರವ್‌ ಭಾರತದಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಯಲ್ಲಿ ಕೈ ಜೋಡಿಸಿದ್ದಾರೆ. ಸೌರವ್‌ ಸಹ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಪಶ್ಚಿಮ ಬಂಗಾಳದ ಅಟ್ಲಾಟಿಕೊ ಡಿ ಕೋಲ್ಕತ್ತಾ ತಂಡರ ಸಹ ಮಾಲೀಕರಾಗಿದ್ದಾರೆ.

ಬೈಚುಂಗ್‌ ಭುಟಿಯಾ

ಭಾರತ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಬೈಚುಂಗ್‌ ಭುಟಿಯಾ ಸಹ ರಾಷ್ಟ್ರೀಯ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 2011ರಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಬೈಚುಂಗ್‌ ಭುಟಿಯಾ ಫುಟ್‌ಬಾಲ್‌ ಶಾಲೆಯನ್ನು ಹೊರ ತಂದಿದ್ದಾರೆ. ಈ ಮೂಲಕ ಭಾರತದಲ್ಲಿ ಫುಟ್‌ಬಾಲ್‌ ಬೆಳವಣಿಗೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ ಎನ್ನಬಹುದು.

ಜಹೀರ್‌ ಖಾನ್‌

ಭಾರತ ಕ್ರಿಕೆಟ್‌ ತಂಡದಲ್ಲಿ ಅತೀ ಯಶಸ್ವಿ ಬೌಲರ್‌ ಎನಿಸಿಕೊಂಡಿರುವ ಜಹೀರ್‌ ಖಾನ್‌ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನಿವೃತ್ತಿಯ ಬಳಿಕಗೂ ಎಡಗೈ ವೇಗಿ ಜಹೀರ್‌ ತಮ್ಮದೇ ಆದ ದೈಹಿಕ ತರಬೇತಿ ಸಂಸ್ಥೆಯನ್ನು ತೆರೆದಿದ್ದಾರೆ. ಅದಕ್ಕೆ ‘ಪ್ರೊಸ್ಪೋರ್ಟ್ಸ್’ ಎಂದು ಹೆಸರು ನೀಡಿದ್ದಾರೆ.

ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರೀಯತೆ ಗಳಿಸಿದ ಭಾರತದ ಹಲವು ಕ್ರೀಡಾಪಟುಗಳು ನಿವೃತ್ತಿಯ ಬಳಿಕ ತೆರೆ ಮರೆಗೆ ಸರಿಯದೇ ಭಾರತದಲ್ಲಿ ಕ್ರೀಡಾ ಬೆಳವಣಿಗೆಗೆ ಸನ್ನದ್ಧರಾಗಿರುವುದು ನಿಜಕ್ಕೂ ಪ್ರಶಂಸೆಗೆ ಅರ್ಹವಾಗಿದೆ.