ಸಿಟಿ ಸುದ್ದಿ

ಎಂಡೋ ಸಂತ್ರಸ್ತೆ ಶ್ರುತಿಗೆ ಸರಕಾರದಿಂದ ನಾಲ್ಕು ಲಕ್ಷ ರೂ.ನೆರವು

DCIM100HPDVC

ಮಂಗಳೂರು: ಎಂಡೋ ಸಂತ್ರಸ್ತೆ ವಾಣಿನಗರದ ನಾರಾಯಣ ಎಂಬವರ ಮಗಳು ಟಿ. ಶ್ರುತಿಗೆ ಕೇರಳ ಸರಕಾರ ಚಿಕಿತ್ಸೆ ಹಾಗೂ ಶಿಕ್ಷಣಕ್ಕಾಗಿ ನಾಲ್ಕು ಲಕ್ಷ ರೂ.ನ್ನು ಸಹಾಯಧನ ನೀಡಲು ಬುಧವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಇದೀಗ ಸಂತ್ರಸ್ತೆ ಶ್ರುತಿ ಕರ್ನಾಟಕ ಸರಕಾರದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ಸರಕಾರಿ ಹೋಮಿಯೋ ವೈದ್ಯಕೀಯ ಕಾಲೇಜಿನಲ್ಲಿ ಬಿಎಚ್‌ಎಂಎಸ್‌ಗೆ ಅಧ್ಯಯನ ನಡೆಸುತ್ತಿದ್ದಾರೆ. ಶ್ರುತಿಯ ಮುಂದಿನ ಚಿಕಿತ್ಸೆಗಾಗಿ ಹಾಗೂ ಶಿಕ್ಷಣವನ್ನು ಮುಂದುವರಿಸುವುದಕ್ಕಾಗಿ ಈಗ ಲಭಿಸುವ ಎಂಡೋಸಲ್ಪಾನ್ ಸಹಾಯಧನವಲ್ಲದೇ ನಾಲ್ಕು ಲಕ್ಷ ರೂ. ಸರಕಾರ ಮಂಜೂರುಗೊಳಿದೆ.
ಈ ಮದ್ಯೆ ಎಂಡೋ ಸಂತ್ರಸ್ತೆ ಬೆಂಗಳೂರಿನಲ್ಲಿ ಹೋಮಿಯೋಪಥಿಕ್ ವೈದ್ಯಕೀಯ ವಿದ್ಯಾರ್ಥಿನಿ ಟಿ. ಶ್ರುತಿಯ ಪತಿ ಅದೂರು ಕುಂಟಾರು ಹೊಸಗದ್ದೆ ನಿವಾಸಿ ಜಗದೀಶ (೨೭) ವೈದ್ಯಕೀಯ ಅಧ್ಯಯನಕ್ಕಾಗಿ ಶುಲ್ಕ ಪಾವತಿಸಲು ಹಣವಿಲ್ಲದೆ ಮನನೊಂದು ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆಯತ್ನಿಸಿದ ಘಟನೆ ನಡೆದಿದೆ. ಇದೀಗ ಚೇತರಿಸಿಕೊಂಡಿದ್ದು, ಇದರ ಫಲವಾಗಿಯೇ ಬುಧವಾರ ನಡೆದ ಸಚಿವ ಸಂಪುಟದಲ್ಲಿ ಸಹಾಯಧನ ಮಂಜೂರುಗೊಳಿಸಲು ತೀರ್ಮಾನಿಸಲಾಗಿದೆ.