ಉಡುಪಿಯ ಮಾಜಿ ಶಾಸಕ ಯು.ಆರ್.ಸಭಾಪತಿ ಕುಂದಾಪುರದಲ್ಲಿ ಹೇಳಿದ ಹೇಳಿಕೆಗೆ ಜಯಪ್ರಕಾಶ್ ಹೆಗ್ಡೆ ಖಡಕ್ ನುಡಿಗಳಿಂದ ಕಾಂಗ್ರೆಸ್ ನಾಯಕರಿಗೆ ಚುಚ್ಚಿದ್ದಾರೆ. ಅಂದಹಾಗೆ ಸಭಾಪತಿ ಹೇಳಿದ್ದು ಹೀಗೆ: ಜಯಪ್ರಕಾಶ್ ಹೆಗ್ಡೆ ಅಸ್ತಿತ್ವ ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಚುನಾವಣೆಯ ಬಳಿಕ ಅವರ ಅಸ್ತಿತ್ವ ಏನು ಎಂಬುದು ತಿಳಿಯಲಿದೆ ಎಂದು ಸವಾಲೊಡ್ಡಿದರು.
ಇದಕ್ಕೆ ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಹೇಳಿದ ಮಾತು ಹೀಗಿದೆ: ಸಭಾಪತಿ ರಾಜೀನಾಮೆ ನೀಡಿ ಹೋದಾಗ ಯಾರೂ ಅವರೊಂದಿಗೆ ಹೋಗಿಲ್ಲ . ಹಿಂದೆ ಸಭಾಪತಿಗೆ ಉಡುಪಿ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿದಾಗ ಅದನ್ನು ಮತ್ತೊಬ್ಬರಿಗೆ ಮಾರಿದ, ಆನಂತರ ಕೊಟ್ಟ ಹಣ ಕಡಿಮೆಯಾಯಿತು ಎಂದು ಅವರನ್ನು ಸೋಲಿಸಿ ಎಂದು ಪ್ರಚಾರ ಮಾಡಿದ್ದೆಲ್ಲ ನಮಗೆ ಗೊತ್ತಿದೆ. ಹೆಗ್ಡೆಯವರನ್ನು ಟೀಕಿಸುವ ಯೋಗ್ಯತೆಯೇ ಇಲ್ಲದ ಮನುಷ್ಯ ಸಭಾಪತಿ.
ಸಭಾಪತಿ ಪ್ರಕಾರ ಅಸ್ತ್ತಿತ್ವ ಅಂದರೆ ಏನು? ಅನ್ಯಾಯವನ್ನು ಪ್ರಶ್ನಿಸಿ ಹೋರಾಟ ಮಾಡುವುದೇ? ಪಕ್ಷದ ನಾಯಕರು ಹೇಳಿದ್ದಕ್ಕೆಲ್ಲ ತಲೆಬಾಗಿಕೊಂಡು ಅವರು ಬಿಸಾಕುವ ಬಿಸ್ಕೆಟ್ಗೆ ಕಾಯುತ್ತಾ ಕೂರುವುದೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಲ್ಲಿ ಬಿಸ್ಕೆಟ್ ತಿನ್ನುವವರಿಗೆ ಮಾತ್ರ ಜಾಗ: ಹೆಗ್ಡೆ ಖಡಕ್ ನುಡಿ
