ಬೈಂದೂರು ಜಿಪಂ ಕ್ಷೇತ್ರ ಈ ಬಾರಿ ಅತಿ ಕುತೂಹಲ ಕೆರಳಿಸಿದ್ದ ಕ್ಷೇತ್ರ. ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ಜಿಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ನ ಪ್ರಭಾವಿ ಮುಖಂಡ ರಾಜು ಪೂಜಾರಿ ಎದುರು ಕಾಂಗ್ರೆಸ್ನ ಇನ್ನೊಬ್ಬ ನಾಯಕರಾಗಿದ್ದ ಶಂಕರ ಪೂಜಾರಿ ಕೊನೆಕ್ಷಣದಲ್ಲಿ ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಚುನಾವಣಾ ಪ್ರಚಾರ ಕಾರ್ಯದ ವೇಳೆ ಸಾಕಷ್ಟು ರೋಚಕತೆ, ವಿವಾದಗಳಿಗೆ ಕ್ಷೇತ್ರ ಆಹಾರವಾಗಿತ್ತು. ಅಂತಿಮವಾಗಿ ಶಂಕರ ಪೂಜಾರಿ 1312 ಮತಗಳಿಂದ ರಾಜು ಪೂಜಾರಿಯವರನ್ನು ಸೋಲಿಸಿದ್ದಾರೆ. ಚುನಾವಣೆ ಪೂರ್ವದಲ್ಲಿ ಪಕ್ಷಾಂತರಗೈದ ಕಾಂಗ್ರೆಸ್ನಿಂದ ಕಾಂಗ್ರೆಸ್ ನಾಯಕನಿಗೆ ಸೋಲಾಗಿರುವುದು ಬೈಂದೂರು ಕಾಂಗ್ರೆಸ್ನಲ್ಲಿ ತಲ್ಲಣ ಮೂಡಿಸಿದೆ.