ಸಿನಿಮಾ ಸುದ್ದಿ

ಸಂಜು ಬಾಬಾರಿಗೆ ವರವಾದ ಸಿದ್ಧಿ ವಿನಾಯಕ

ಏರ್‌‌ಪೋರ್ಟ್‌‌ನಲ್ಲಿ ತಮ್ಮ ಅಪಾರ ಅಭಿಮಾನಿಗಳಿಂದ ಸಂಜಯ್ ದತ್‌ ಭರ್ಜರಿ ಸ್ವಾಗತ ಪಡೆದರು. ಈ ಸಂದರ್ಭದಲ್ಲಿ ಅವರ ಪತ್ನಿ ಮಾನ್ಯತಾ ಜೊತೆಗಿದ್ದರು. ಬಳಿಕ ನಿಲ್ದಾಣದಿಂದ ನೇರವಾಗಿ ಪ್ರಸಿದ್ಧ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿದ ದತ್  ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿ ಕೂಡ ಅವರ ಅಭಿಮಾನಿಗಳು ಸೇರಿದ್ದರು.

ಸಿದ್ಧಿ ವಿನಾಯಕನ ದರ್ಶನ ಬಳಿಕ ಯಾರೊಂದಿಗೂ ಮಾತನಾಡದ ಸಂಜಯ್ ತಮ್ಮ ತಾಯಿ ನರ್ಗೀಸ್ ದತ್‌ ಭೇಟಿ ತೆರಳಿದರು. ಇನ್ನು, ಇದಕ್ಕೂ ಮೊದಲು ಸಂಜಯ್ ದತ್‌ ಅವರನ್ನು ಬರಮಾಡಿಕೊಳ್ಳಲು ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್‌ ತಮ್ಮ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಮುಂಬೈ ಏರ್‌‌ಪೋರ್ಟ್‌‌ ಕಳುಹಿಸಿಕೊಟ್ಟಿದ್ದರು. ಇಂದು ಇಡೀ ದಿನ ಸಂಜಯ್‌ ದತ್‌ಗೆ ಈ ಭದ್ರತಾ ಸಿಬ್ಬಂದಿ ಸೆಕ್ಯುರಿಟಿ ನೀಡಲಿದ್ದಾರೆ ಎನ್ನಲಾಗಿದೆ. ಹಾಗೂ ಸಂಜಯ್‌ ಮತ್ತು ಅವರ ಕುಟುಂಬದ ಜೊತೆ ಸಲ್ಮಾನ್ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಕಳೆಯಲಿದ್ದಾರೆ ಎಂದು ಗೊತ್ತಾಗಿದೆ.

ಯರವಾಡ ಜೈಲಿನಿಂದ ಹೊರ ಬರುವ ವೇಳೆ ಜೈಲಿನ ಮುಂದೆ ಭೂಮಿ ಮುಟ್ಟಿ ನಮಸ್ಕರಿಸಿ, ಹಿಂತಿರುಗಿ ಜೈಲಿಗೆ ಸೆಲ್ಯೂಟ್‌ ಹೊಡೆದರು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜಯ್ 42 ತಿಂಗಳು ಜೈಲುವಾಸ ಅನುಭವಿಸಿ ಇಂದು ಬೆಳಗ್ಗೆಯಷ್ಟೆ ಬಿಡುಗಡೆಯಾಗಿದ್ದರು.